Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬರಿಗಾಲ ಎಂ.ಎಫ್.ಹುಸೇನ್ ಸಾಹೇಬರ ಮೀನಾಕ್ಷಿ
ಬರಿಗಾಲ ಹುಸೇನ್ ಸಾಹೇಬರು ತಮ್ಮ ಕುಂಚ ಪರಪಂಚದ ಗೆರೆಗಳಿಗೆ ಇನ್ನೊಂದು ಸಿನಿಮಾ ರೂಪು ಕೊಡುತ್ತಿದ್ದಾರೆ. ಮೊದಲೇ ನಿರ್ಧಾರಿತವಾದಂತೆ ತಬು ಈ ಚಿತ್ರದ ನಾಯಕಿ. ಚಿತ್ರದ ಹೆಸರು- ಮೀನಾಕ್ಷಿ.
ಮಾಧುರಿ ದೀಕ್ಷಿತ್ ಸೌಂದರ್ಯ ಬಣ್ಣದ ಲೋಕದಿಂದ ಸಿನಿಮಾ ಜಗತ್ತಿಗೆ ಕಾಲಿಡುವಂತೆ ಹುಸೇನ್ ತಾತನನ್ನು ಪ್ರೇರೇಪಿಸಿದ್ದೇ ತಡ, ಗಜಗಾಮಿನಿ ತೆರೆಗೆ ಬಂತು. ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮಾಡಿದ ಸದ್ದಿಗಿಂತ ಮಾಧ್ಯಮ ಲೋಕದಲ್ಲಿ ಸುದ್ದಿಯಾದದ್ದೇ ಹೆಚ್ಚು. ಮುಂದೆ ಹುಸೇನರ ಕನಸಲ್ಲಿ ಮಾಧುರಿ ಜಾಗಕ್ಕೆ ತಬು ಬಂದಳು. ಮುಂದಿನ ತಮ್ಮ ಸಿನಿಮಾದ ನಾಯಕಿ ತಬು ಎಂದು ಹುಸೇನರು ಅವತ್ತೇ ಗೊತ್ತು ಮಾಡಿಬಿಟ್ಟರು. ತಬು ಕೂಡ ತಕರಾರಿಲ್ಲದೆ ಕಾಲ್ಶೀಟ್ ಕೊಟ್ಟಳು.
ಈ ಸಿನಿಮಾ ಕೂಡ ಗಜಗಾಮಿನಿಯಂತೆ ಸ್ತ್ರೀರೂಪಕಗಳ ಭಂಡಾರ. 'ಮೀನಾಕ್ಷಿ'ಯಲ್ಲಿ ತಬು ಮಾಡುತ್ತಿರುವುದು ದ್ವಿಪಾತ್ರ. ಹೈದರಾಬಾದ್, ಜೈಸಲ್ಮೆರ್ ಹಾಗೂ ಪ್ರಾಗ್- ಈ ಮೂರು ಊರುಗಳಲ್ಲಿ ಆಯಾ ಪರಿಸ್ಥಿತಿಗೆ ತಕ್ಕಂತೆ ಸ್ತ್ರೀ ಸ್ವಭಾವದ ಬದಲಾವಣೆಯ ಮುಖಗಳನ್ನು ಹುಸೇನ್ ಸಾಹೇಬರು ಬಿಚ್ಚಿಟ್ಟಿದ್ದಾರೆ. ತನ್ನ ಹೊಸ ಕಥೆಗೆ ಮೀನಾಕ್ಷಿ ತಕ್ಕ ಪಾತ್ರ ಎಂದು ಅವಳ ವ್ಯಕ್ತಿತ್ವವನ್ನು ಅಳೆಯಲು ಹೋಗುವ ನಾಯಕ ಒಂದೊಂದೂ ಊರಿನಲ್ಲಿ ಬದಲಾಗುವ ಆಕೆಯ ವರ್ತನೆಯನ್ನು ಕಂಡು ದಂಗಾಗುತ್ತಾನೆ. ತನ್ನ ಕಥೆಯ ವಸ್ತುವಿಗೆ ತಕ್ಕಂಥ ಹರಳುಗಟ್ಟಿದ ಆಕೆಯ ವ್ಯಕ್ತಿತ್ವ ಅವನ ಅಳತೆಗೋಲಿಗೆ ಎಟುಕುವುದೇ ಇಲ್ಲ. ಆಗ ಗೊಂದಲಕ್ಕೆ ಸಿಲುಕುತ್ತಾನೆ. ಇದು ಕಥೆಯ ಸಾರಾಂಶ.
ಈ ಸಿನಿಮಾದ ವಿಶೇಷವೆಂದರೆ ಖುದ್ದು ಹುಸೇನ್ ಸಾಹೇಬರು ಎರಡು ಹಾಡಲ್ಲಿ ಕಂಠ ಶಕ್ತಿ ತೋರಿರುವುದು ! ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕನ ಪಾತ್ರದಲ್ಲಿ ರಘುವೀರ್ ಯಾದವ್ ನಟಿಸಿದ್ದಾರೆ.
ತನಗೆ ನಾಯಕಿಯ ಬುಲಾವನ್ನು ಹುಸೇನ್ ಸಾಹೇಬರು ಕೊಟ್ಟಿದ್ದಾರೆ ಅಂತ ಬೆಂಗಳೂರಿನ ಇಂದಿರಾನಗರದಲ್ಲಿ ಹೇಳಿಕೊಂಡು ತಿರುಗುತ್ತಿದ್ದ ರುಚಿತಾ ಪ್ರಸಾದ್ ಮುಂದೆ ಈ ವಿಷಯ ಹೇಳಿದರೆ, ಕೆಂಪಾಗುತ್ತಾರೆ. ತಮ್ಮ ಸ್ಥಳೀಯ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಅವರು ಹೇಳಿಕೊಂಡಿದ್ದ ಚಿಕ್ಕ ಸುಳ್ಳಿನ ಪಾತ್ರಧಾರಿ ಹುಸೇನ್ ಸಾಹೇಬರು ಅನ್ನುವುದು ಮಾತ್ರ ದುರಂತ !
ಬರಿಗಾಲಿ ಹುಸೇನ್ ಸಾಹೇಬರ ಸಿನಿಮಾ ಸಾಹಸವನ್ನು ನಿಮ್ಮ ಪದಗಳಲ್ಲಿ ಬಣ್ಣಿಸಿ.