twitter
    For Quick Alerts
    ALLOW NOTIFICATIONS  
    For Daily Alerts

    ರಿಮೇಕ್‌ಗೆ ಜೈ ಮತ್ತು ಸೈ -ವಿಷ್ಣು ವರ್ಧನ್‌

    By Staff
    |
  • ದಟ್ಸ್‌ಕನ್ನಡ ನ್ಯೂಸ್‌ಬ್ಯೂರೋ
  • ಬೆಂಗಳೂರು ವಿವಿ ‘ಗೌರವ ಡಾಕ್ಟರೇಟ್‌’ ಪಡೆದ ಸಂಭ್ರಮದ ಮಧ್ಯೆ, ಪ್ರೆಸ್‌ಕ್ಲಬ್‌ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಷ್ಣು ವರ್ಧನ್‌ ಮಾತನಾಡುತ್ತಿದ್ದರು.

    ಡಾಕ್ಟರೇಟ್‌ಗೆ ನಾನು ಅರ್ಹನೆ ಅಥವಾ ಅರ್ಹನಲ್ಲವೇ? ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಆದರೆ ಆಶೀರ್ವಾದ ರೂಪದಲ್ಲಿ ಬಂದಿರುವ ಡಾಕ್ಟರೇಟ್‌ ಬೇಡ ಎಂದು ಅಹಂಕಾರ ಪ್ರದರ್ಶಿಸಲಾರೆ ಎಂದರು.

    ಈ ಪ್ರಶಸ್ತಿ /ಗೌರವ ನನ್ನ ಗುರುಗಳಾದ ಪುಟ್ಟಣ್ಣ ಅವರಿಗೆ ಅರ್ಪಿತ. ಪುಟ್ಟಣ್ಣ ಚಿತ್ರಮಂದಿರ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಹೋರಾಟ ನಡೆಸುವುದಾಗಿ ವಿಷ್ಣು ಈ ಸಂದರ್ಭದಲ್ಲಿ ಘೋಷಿಸಿದರು.

    ವಿಷ್ಣು ವಿಚಾರಧಾರೆಯ ಸ್ಯಾಂಪಲ್‌ಗಳು :

  • ರಿಮೇಕ್‌ ಚಿತ್ರ ಬೇಡ ಅನ್ನೋರು, ಅನುವಾದಿತ ಕಾದಂಬರಿಯನ್ನು ಯಾಕೆ ಓದ ಬೇಕು? ಎಲ್ಲಿಂದಲೋ ಬಂದ ಪೀಜಾವನ್ನು ಯಾಕೆ ತಿನ್ನಬೇಕು?

  • ರಾಜಕೀಯಕ್ಕೆ ಸದ್ಯಕ್ಕೆ ಬರೋದಿಲ್ಲ. ಅದು ನನಗೆ ಸರಿಹೊಂದುವುದೇ ಅನ್ನೋ ಪ್ರಶ್ನೆ ನನ್ನ ಮನದಲ್ಲಿದೆ.

  • ಚಿತ್ರರಂಗದಲ್ಲಿ ಒಂದು ಗುಂಪು ನನ್ನನ್ನು ಪಾಕಿಸ್ತಾನದವನಂತೆ ಕಾಣುತ್ತಿದೆ. ವ್ಯಕ್ತಿಯಾಗಿ ನಾನಿಲ್ಲಿ ಏನೂ ಮಾಡುವ ಹಾಗಿಲ್ಲ.

  • ಕನ್ನಡ ಪ್ರೀತಿ ಎಲ್ಲರಿಗೂ ಬೇಕು. ಭಾಷೆಯ ಋಣ ತೀರಿಸುವುದು ಎಲ್ಲರ ಕರ್ತವ್ಯ.

  • ನನಗೆ ಪ್ರಶಸ್ತಿಗಳ ಬಗ್ಗೆ ಆಕರ್ಷಣೆ ಇಲ್ಲ. ನನಗ್ಯಾವ ಪ್ರಶಸ್ತಿಗಳು ಬೇಡ.
  • ಮತ್ತೊಂದು ಸುದ್ದಿ : ವಿಷ್ಣುವರ್ಧನ್‌ ಅಭಿನಯದ ಹೊಸ ಚಿತ್ರ ‘ವಿಷ್ಣು ಸೇನಾ’ ಚಿತ್ರ ಶುಕ್ರವಾರ(ಡಿ.23) ರಾಜ್ಯದೆಲ್ಲೆಡೆ ತೆರೆಕಾಣಲಿದೆ.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 7:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X