Don't Miss!
- News PSI Re-Exam: ಪಿಎಸ್ಐ ಮರುಪರೀಕ್ಷೆ ಅಂತಿಮ ಅಂಕಪಟ್ಟಿ ಪ್ರಕಟ: CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಟ್ಟು-ಕಂಗೆಟ್ಟು ಕಡೆಗೆ ಶಶಿಕುಮಾರ್ ಕಾಂಗ್ರೆಸ್ ಸೇರಿದ್ರು!
- ಪುಷ್ಪ ಪಾದ
ಸ್ಯಾಂಡಲ್ವುಡ್ ಅಂತೂ ಒಂದು ಲೆಕ್ಕದಲ್ಲಿ ಶಶಿಕುಮಾರ್ ಅವರನ್ನು ಮರೆತುಬಿಟ್ಟಿದೆ. ಇನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರಿಗೆ, ಶಶಿಕುಮಾರ್ ಬಗ್ಗೆ ಮೊದಲಿನ ಆಕರ್ಷಣೆ ಉಳಿದಿಲ್ಲ. ಸಂಸದರಾಗಿದ್ದ ತಮ್ಮಅಧಿಕಾರದವಧಿ ಉದ್ದಕ್ಕೂ ಗುಂಡು-ತುಂಡುಗಳ ಮಧ್ಯೆಯೇ ಕಾಲ ಸವೆಸಿದ ಶಶಿ, ಈಗ ಸದ್ಯಕ್ಕೆ ಒಂಟಿ.
ಅವರು ಮೊದಲಿದ್ದ ಜೆಡಿಯು, ಈಗ ರಾಜ್ಯದಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ. ಜೆಡಿಎಸ್ ಸೇರುವ ಹಂಬಲ ಹೊಂದಿದ್ದ ಶಶಿಗೆ, ದೇವೇಗೌಡರು ಯಾಕೋ ಬಾ ಎನ್ನಲಿಲ್ಲ. ಕೊನೆಗೆ ಎಲ್ಲರಿಗೂ ಆಶ್ರಯ ನೀಡುವ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದಾರೆ. ಇಲ್ಲವರು ಏನನ್ನೂ ನಿರೀಕ್ಷಿಸುವಂತಿಲ್ಲ. ಯಾಕೆಂದರೆ ; ಶಶಿಕುಮಾರ್ರಂತವರ ದೊಡ್ಡ ಗುಂಪೇ ಅಲ್ಲಿದೆ.
ಹೀಗಾಗಿಯೇ ಯಾವುದೇ ಷರತ್ತುಗಳಿಲ್ಲದೇ ಶಶಿಕುಮಾರ್, ಕಾಂಗ್ರೆಸ್ ಪಕ್ಷ ಪ್ರವೇಶಿಸಿದ್ದಾರೆ. ಅವರನ್ನು ಶುಕ್ರವಾರ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರ ಹಾಕಿ ಸ್ವಾಗತಿಸಿದ್ದಾರೆ. ಶಶಿಕುಮಾರ್ಗೆ, ಹಾರಕ್ಕಿಂತಲೂ ಕಾಂಗ್ರೆಸ್ನಲ್ಲಿ ಹೆಚ್ಚಿಗೆ ಇನ್ನೇನಾದರೂ ಸಿಗುವ ಸಾಧ್ಯತೆಗಳು ಅತಿ ಕಡಿಮೆ.
ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಪ್ರವೇಶಿಸಿದ ಬೆನ್ನಲ್ಲಿಯೇ, ಅವರ ಹಾದಿಯನ್ನೇ ಶಶಿಕುಮಾರ್ ಆರಿಸಿಕೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ.