twitter
    For Quick Alerts
    ALLOW NOTIFICATIONS  
    For Daily Alerts

    ಹಾಸ್ಯ ರತ್ನಾಕರನ ಕಣ್ಣುಗಳು ಮಣ್ಣಾಗದೆ ಬೆಳಕಾದವು

    By Rajendra
    |

    Actor K M Rathnakar
    ಮಂಗಳವಾರ (ಸೆ.21)ವಿಧಿವಶರಾದ ಹಾಸ್ಯ ನಟ ಕೆ ಎಂ ರತ್ನಾಕರ್ ಅವರಅಂತ್ಯಕ್ರಿಯೆ ಬುಧವಾರ ನೆರವೇರಿತು. ರತ್ನಾಕರ್ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾದರೆ ಅವರ ಕಣ್ಣುಗಳು ಮಾತ್ರ ಮಣ್ಣಾಗಲಿಲ್ಲ. ರತ್ನಾಕರ್ ಅವರು ಬಹು ಹಿಂದೆಯೇ ತಮ್ಮ ಕಣ್ಣುಗಳನ್ನು ದಾನವಾಗಿ ಬರೆದುಕೊಟ್ಟಿದ್ದರು.

    ವರನಟ ಡಾ.ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ ಬಳಿಕ ರತ್ನಾಕರ್ ಅವರು ನೇತ್ರದಾನ ಪತ್ರಗಳಿಗೆ ಸಹಿಹಾಕಿದ್ದರು. ರತ್ನಾಕರ್ ಅವರ ಪತ್ನಿ ಮೂಕಾಂಬಿಕಾ ಅವರು ಹದಿನೆಂಟು ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರವನ್ನು ಅವರ ಮೂವರು ಪುತ್ರರು ನೆರವೇರಿಸಿದರು.

    ಡಾ.ಜಯಮಾಲಾ, ಜಯಂತಿ, ಶಿವರಾಜ್ ಕುಮಾರ್, ದರ್ಶನ್, ದೊಡ್ಡಣ್ಣ ಸೇರಿದಂತೆ ಕನ್ನಡ ಚಿತ್ರರಂಗದಹಲವು ಕಲಾವಿದರು ಮೈಸೂರಿಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ರತ್ನಾಕರ್ ಅವರು ತಮ್ಮ ವಿಶಿಷ್ಟ ಧ್ವನಿಯಿಂದ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ಹಿರಿಯ ಜೀವ ನೇತ್ರದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    Thursday, September 23, 2010, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X