Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಸರುಘಟ್ಟದಲ್ಲಿ ಬಣ್ಣಬಣ್ಣದ ಲೋಕ
ಅಂದು ಹೆಸರುಘಟ್ಟದ ಬಳಿಯಿರುವ ಕೃಷ್ಣ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಡಗರ ಮನೆ ಮಾಡಿತ್ತು. ಬಣ್ಣದ ಲೋಕದ ತಾರೆಗಳೆಲ್ಲಾ ಅಲ್ಲಿ ವಿಹರಿಸುತ್ತಿದರು. ಚಿತ್ರೀಕರಣ ವಿಕ್ಷಣೆಗೆ ಜನರ ಸಂತೆ ಅಲ್ಲಿ ನೆರೆದಿತ್ತು. ಇಂತಹ ಸಂಭ್ರಮದ ವಾತಾವರಣದಲ್ಲಿ 'ಬಣ್ಣಬಣ್ಣದ ಲೋಕ' ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿತು.
ನಾಯಕನಾಗಿ ಅಭಿನಯಿಸುತ್ತಿರುವ ರಾಂಪ್ರಸಾದ್ ಚಿತ್ರದ ನಿರ್ದೇಶಕ ಕೂಡ. ನಿರ್ದೇಶನದ ನಿರ್ವಹಣೆಯೊಂದಿಗೆ ಪ್ರಸಾದ್ ಈ ಚಿತ್ರದಿಂದ ಗೀತೆರಚನೆಕಾರರಾಗೂ ಪರಿಚಯವಾಗುತ್ತಿದ್ದಾರೆ. ಇವರ ರಚನೆಯ 'ಅಂಕು ಡೊಂಕು ತೋರಿದರೆ ವೈಯ್ಯಾರಿ-ಸೋಲುವೆನೆ ಚಿನ್ನ ಇವನು ಮಯೂರಿ' ಎಂಬ ಗೀತೆಗೆ ರಾಂಪ್ರಸಾದ್ ಅವರೊಂದಿಗೆ ಹರ್ಷ ಹಾಗೂ ಮೇಘನ ಗೌಡ ಹೆಜ್ಜೆ ಹಾಕಿದರು. ರಾಮು ನೃತ್ಯ ಸಂಯೋಜಿಸಿದರು.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಶಶಿಕಲಾ ಹಾಗೂ ನರಸಿಂಹ ಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಂಪ್ರಸಾದ್ ನೂತನ ಪ್ರತಿಭೆ. ನಟನೆಗಷ್ಟೇ ಸೀಮಿತರಾಗದ ಪ್ರಸಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ವಿ.ಚಂದ್ರಶೇಖರ್ ಛಾಯಾಗ್ರಹಣ, ಡಿ.ಥಾಮಸ್ ಸಂಗೀತ, ಬಸವರಾಜ್ ಸಂಕಲನ, ಅಶೋಕ್ ಸಾಹಸ, ಅನಿಲ್ಕೃಷ್ಣ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಂಪ್ರಸಾದ್, ಶ್ರಾವಣಿ, ರೂಪ, ವಿನುಷ, ಬ್ಯಾಂಕ್ ಜನಾರ್ಧನ್, ಸಂತೋಷ್ ಉಪ್ಪಿನ್, ರೇಖಾ ವಿ ಕುಮಾರ್, ಪೂರ್ವ ವಸಂತಕುಮಾರ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)