Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕ್ಟರ್ಸ್ Vs ಫೈಟರ್ ಗೆ ವರುಣನೇ ಅಂಪೈರ್
ಡಾ.ರಾಜ್ ಕಪ್ ಆರಂಭ ಆಟದ ಟಾಸ್ ಹಾಕುವ ಮುನ್ನವೇ , ಆಟಗಾರರು ಪ್ಯಾಡ್ ಕಟ್ಟುವ ಮುನ್ನವೇ ಕಲಾವಿದರುಗಳು ತೊಡೆತಟ್ಟಿ ಒಂದಿಷ್ಟು ಬಂಡಾಯ ರಾಗ ಹಾಡಿದ್ದು ಈಗ ಹಳೆ ಕಥೆ.
ಈ ಅಪಸ್ವರ ಮುಗಿಲು ಮುಟ್ಟುವ ಮುನ್ನವೇ ತಣ್ಣಗಾಗಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎನ್ನುವಷ್ಟರಲ್ಲೇ ವರುಣ ದೇವ ಅಡ್ಡಲಾಗಿ ನಿಲ್ಲುವ ಎಲ್ಲ ಸೂಚನೆಗಳು ಕಂಡು ಬಂದಿದೆ.
ಹೌದು, ಇಂದಿನಿಂದ ದಾವಣಗೆರೆಯಲ್ಲಿ ಸ್ಯಾಂಡಲ್ವುಡ್ ಕಲಾವಿದರ 'ಡಾ. ರಾಜ್ ಕಪ್' ಟ್ವೆಂಟಿ-20 ಚಾಂಪಿಯನ್ಶಿಪ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಸುದೀಪ್ ಹಾಗೂ ಥ್ರಿಲ್ಲರ್ ಮಂಜು, ದುನಿಯಾ ವಿಜಯ್ ತಂಡಗಳು ಸೆಣಸಲಿವೆ. ಆದರೆ, ಮಳೆರಾಯನಿಗೆ ಹೆದರಿಕೊಂಡೇ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ.
ಅಭ್ಯಾಸ ಪಂದ್ಯಕ್ಕೆ ತಪ್ಪದೆ ಬರುತ್ತಿದ್ದದುನಿಯಾ ವಿಜಯ್ ಮೈದಾನಕ್ಕೆ ಇಳಿಯುವುದು ಗ್ಯಾರಂಟಿ ಎನ್ನಲಾಗಿದೆ. ಯುವಕಲಾವಿದರಾದ ಯಶ್, ಚಿರಂಜೀವಿ ಸರ್ಜಾ, ಚೇತನ್,ಲೂಸ್ ಮಾದ ಯೋಗೇಶ್ ಮಾತ್ರ ಬ್ಯಾಟ್ ಬೀಸಿ ಸಿಕ್ಸರ್ ಎತ್ತಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರಿ ತಯಾರಿ ನಡೆಸುತ್ತಿದ್ದಾರೆ.
ಪಂದ್ಯಗಳ ವೀಕ್ಷಣೆಗೆ ಟಿಕೆಟ್ ನಿಗದಿಪಡೆಸಿದ್ದು, ಇದರಿಂದ ಬರುವ ಎಲ್ಲಾ ಹಣ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹೋಗಲಿದೆ. ಇಂದಿನ ಎರಡನೇ ಪಂದ್ಯದಲ್ಲಿ ಸಚಿವ ಶ್ರೀರಾಮುಲು ಮುಂದಾಳತ್ವದ ಶಾಸಕರ ತಂಡ ದಿಂಗಂತ್ ಮತ್ತು ಯೋಗಿ ನೇತೃತ್ವದ ತಂಡವನ್ನು ಎದುರಿಸಲಿದೆ.