Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಹ ಚಿತ್ರದಿಂದ ಓಂ ಪ್ರಕಾಶ್ ರಾವ್ಗೆ ಗೇಟ್ ಪಾಸ್
ಚಲನಚಿತ್ರ ನಿರ್ಮಾಪಕ ರಾಮು ತಮ್ಮ ಮುಂದಿನ ಚಿತ್ರ 'ಸಿಂಹ' ಚಿತ್ರದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ಗೆ ಗೇಟ್ ಪಾಸ್ ನೀಡಿದ್ದಾರೆ. ಆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಮಾದೇಶ ಅವರ ಹೆಗಲಿಗೆ ಹೊರಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.
ಎಲ್ಲವೂ ಅಂದುಕೊಂಡಂತೆ ನಡೆದರೆ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ (ಏಪ್ರಿಲ್ 24) ರಂದು 'ಸಿಂಹ' ಚಿತ್ರ ಸೆಟ್ಟೇರಲಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣನ 102ನೇ ಚಿತ್ರ ಇದು. ಈ ಹಿಂದೆ ರಾಮು ನಿರ್ಮಿಸಿದ್ದ 'ಸಿಂಹದ ಮರಿ' ಮತ್ತು 'ಎಕೆ 47' ಚಿತ್ರಗಳಿಗೆ ಓಂ ಆಕ್ಷನ್, ಕಟ್ ಹೇಳಿದ್ದರು. ಅವೆರಡೂ ಚಿತ್ರಗಳು ಭರ್ಜರಿ ಯಶಸ್ಸು ದಾಖಲಿದ್ದವು. ಶಿವಣ್ಣನಿಗೆ ಒಳ್ಳೆ ಹೆಸರು ತಂದುಕೊಟ್ಟ ಚಿತ್ರಗಳು. ಆದರೆ ಓಂರನ್ನು ರಾಮು ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದೆ.
ಮೂಲಗಳ ಪ್ರಕಾರ, ರಾಮು ಅವರ ಮತ್ತೊಂದು ಚಿತ್ರ 'ಭೀಮ'ನಿಗೆ ಓಂ ಪಕ್ಕಾ ಕತೆ ಹೆಣೆಯುತ್ತಿದ್ದಾರಂತೆ. ಹಾಗಾಗಿ 'ಸಿಂಹ' ನಿರ್ದೇಶಿಸುವ ಅವಕಾಶವನ್ನು ಮಾದೇಶ ಹೆಗಲಿಗೆ ಹೊರಿಸಿದ್ದಾರಂತೆ. ಅಂದಹಾಗೆ 'ಭೀಮ' ಚಿತ್ರ ನಾಯಕ ನಟ ದರ್ಶನ್. ಸದ್ಯಕ್ಕೆ ಮಾದೇಶ ಅವರು 'ದಂಡಂ ದಶಗುಣಂ' (ರಮ್ಯಾ, ಚಿರಂಜೀವಿ ಸರ್ಜಾ) ಹಾಗೂ ಪುನೀತ್ ಅವರ 'ಹುಡುಗ್ರು' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದಾದ ಬಳಿಕವಷ್ಟೇ 'ಸಿಂಹ' ಮಾದೇಶ ಸಿಂಹದ ಭೇಟೆಯಾಡಲಿದ್ದಾರೆ.