Don't Miss!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಹ ಚಿತ್ರದಿಂದ ಓಂ ಪ್ರಕಾಶ್ ರಾವ್ಗೆ ಗೇಟ್ ಪಾಸ್
ಚಲನಚಿತ್ರ ನಿರ್ಮಾಪಕ ರಾಮು ತಮ್ಮ ಮುಂದಿನ ಚಿತ್ರ 'ಸಿಂಹ' ಚಿತ್ರದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ಗೆ ಗೇಟ್ ಪಾಸ್ ನೀಡಿದ್ದಾರೆ. ಆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಮಾದೇಶ ಅವರ ಹೆಗಲಿಗೆ ಹೊರಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.
ಎಲ್ಲವೂ ಅಂದುಕೊಂಡಂತೆ ನಡೆದರೆ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ (ಏಪ್ರಿಲ್ 24) ರಂದು 'ಸಿಂಹ' ಚಿತ್ರ ಸೆಟ್ಟೇರಲಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣನ 102ನೇ ಚಿತ್ರ ಇದು. ಈ ಹಿಂದೆ ರಾಮು ನಿರ್ಮಿಸಿದ್ದ 'ಸಿಂಹದ ಮರಿ' ಮತ್ತು 'ಎಕೆ 47' ಚಿತ್ರಗಳಿಗೆ ಓಂ ಆಕ್ಷನ್, ಕಟ್ ಹೇಳಿದ್ದರು. ಅವೆರಡೂ ಚಿತ್ರಗಳು ಭರ್ಜರಿ ಯಶಸ್ಸು ದಾಖಲಿದ್ದವು. ಶಿವಣ್ಣನಿಗೆ ಒಳ್ಳೆ ಹೆಸರು ತಂದುಕೊಟ್ಟ ಚಿತ್ರಗಳು. ಆದರೆ ಓಂರನ್ನು ರಾಮು ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದೆ.
ಮೂಲಗಳ ಪ್ರಕಾರ, ರಾಮು ಅವರ ಮತ್ತೊಂದು ಚಿತ್ರ 'ಭೀಮ'ನಿಗೆ ಓಂ ಪಕ್ಕಾ ಕತೆ ಹೆಣೆಯುತ್ತಿದ್ದಾರಂತೆ. ಹಾಗಾಗಿ 'ಸಿಂಹ' ನಿರ್ದೇಶಿಸುವ ಅವಕಾಶವನ್ನು ಮಾದೇಶ ಹೆಗಲಿಗೆ ಹೊರಿಸಿದ್ದಾರಂತೆ. ಅಂದಹಾಗೆ 'ಭೀಮ' ಚಿತ್ರ ನಾಯಕ ನಟ ದರ್ಶನ್. ಸದ್ಯಕ್ಕೆ ಮಾದೇಶ ಅವರು 'ದಂಡಂ ದಶಗುಣಂ' (ರಮ್ಯಾ, ಚಿರಂಜೀವಿ ಸರ್ಜಾ) ಹಾಗೂ ಪುನೀತ್ ಅವರ 'ಹುಡುಗ್ರು' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದಾದ ಬಳಿಕವಷ್ಟೇ 'ಸಿಂಹ' ಮಾದೇಶ ಸಿಂಹದ ಭೇಟೆಯಾಡಲಿದ್ದಾರೆ.