Don't Miss!
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಹ ಚಿತ್ರದಿಂದ ಓಂ ಪ್ರಕಾಶ್ ರಾವ್ಗೆ ಗೇಟ್ ಪಾಸ್
ಚಲನಚಿತ್ರ ನಿರ್ಮಾಪಕ ರಾಮು ತಮ್ಮ ಮುಂದಿನ ಚಿತ್ರ 'ಸಿಂಹ' ಚಿತ್ರದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ಗೆ ಗೇಟ್ ಪಾಸ್ ನೀಡಿದ್ದಾರೆ. ಆ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಮಾದೇಶ ಅವರ ಹೆಗಲಿಗೆ ಹೊರಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದು.
ಎಲ್ಲವೂ ಅಂದುಕೊಂಡಂತೆ ನಡೆದರೆ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ (ಏಪ್ರಿಲ್ 24) ರಂದು 'ಸಿಂಹ' ಚಿತ್ರ ಸೆಟ್ಟೇರಲಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣನ 102ನೇ ಚಿತ್ರ ಇದು. ಈ ಹಿಂದೆ ರಾಮು ನಿರ್ಮಿಸಿದ್ದ 'ಸಿಂಹದ ಮರಿ' ಮತ್ತು 'ಎಕೆ 47' ಚಿತ್ರಗಳಿಗೆ ಓಂ ಆಕ್ಷನ್, ಕಟ್ ಹೇಳಿದ್ದರು. ಅವೆರಡೂ ಚಿತ್ರಗಳು ಭರ್ಜರಿ ಯಶಸ್ಸು ದಾಖಲಿದ್ದವು. ಶಿವಣ್ಣನಿಗೆ ಒಳ್ಳೆ ಹೆಸರು ತಂದುಕೊಟ್ಟ ಚಿತ್ರಗಳು. ಆದರೆ ಓಂರನ್ನು ರಾಮು ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆ ಅಚ್ಚರಿ ಮೂಡಿಸಿದೆ.
ಮೂಲಗಳ ಪ್ರಕಾರ, ರಾಮು ಅವರ ಮತ್ತೊಂದು ಚಿತ್ರ 'ಭೀಮ'ನಿಗೆ ಓಂ ಪಕ್ಕಾ ಕತೆ ಹೆಣೆಯುತ್ತಿದ್ದಾರಂತೆ. ಹಾಗಾಗಿ 'ಸಿಂಹ' ನಿರ್ದೇಶಿಸುವ ಅವಕಾಶವನ್ನು ಮಾದೇಶ ಹೆಗಲಿಗೆ ಹೊರಿಸಿದ್ದಾರಂತೆ. ಅಂದಹಾಗೆ 'ಭೀಮ' ಚಿತ್ರ ನಾಯಕ ನಟ ದರ್ಶನ್. ಸದ್ಯಕ್ಕೆ ಮಾದೇಶ ಅವರು 'ದಂಡಂ ದಶಗುಣಂ' (ರಮ್ಯಾ, ಚಿರಂಜೀವಿ ಸರ್ಜಾ) ಹಾಗೂ ಪುನೀತ್ ಅವರ 'ಹುಡುಗ್ರು' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದಾದ ಬಳಿಕವಷ್ಟೇ 'ಸಿಂಹ' ಮಾದೇಶ ಸಿಂಹದ ಭೇಟೆಯಾಡಲಿದ್ದಾರೆ.