Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಿಯ ರಾಧೆಯಾಗಿ ತೆಲುಗಿನ ಮಧುವಿಕಾ
ಜಿ.ಎಲ್.ಕೆ ಫಿಲಂಸ್ ಲಾಂಛನದಲ್ಲಿ ಜಿ.ರವಿಕಮಲ್ ಮತ್ತು ಜಿ.ಶ್ರೀಧರ್ ನಿರ್ಮಿಸುತ್ತಿರುವ ಚಿತ್ರ 'ರಾಧ' ಚಿತ್ರದ ನಾಯಕಿಯಾಗಿ ಮಧುವಿಕಾ ಆಯ್ಕೆಯಾಗಿದ್ದಾರೆ. ನೆರೆಯ ಆಂಧ್ರದವರಾದ ಇವರು ತೆಲುಗಿನ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ರಾಯಲ್ಸೀಮಾ ಪ್ರಾಂತ್ಯದ ಕಡಪದ ಬಳಿಯ ಗುರುಕುಂಡದಲ್ಲಿ ಈಗ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ನಾಯಕಿಯನ್ನು ಹುಡುಕಿಕೊಂಡು ಡಾಬಾದ ಬಳಿ ಬಂದ ನಾಯಕನಿಗೆ ಖಳನಟರು ಎದುರಾಗುತ್ತಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆಯುತ್ತದೆ. ಈ ಮೇಲಿನ ಸನ್ನಿವೇಶವನ್ನು ನಿರ್ದೇಶಕ ಹರಿಕಿರಣ್ ಕಡಪದ ಬಳಿಯ ಖಾಸಗಿ ಡಾಬಾದಲ್ಲಿ ಚಿತ್ರೀಕರಿಸಿಕೊಂಡರು. ಈ ಸನ್ನಿವೇಶದಲ್ಲಿ ನಾಯಕ ವಿಜಯರಾಘವೇಂದ್ರ, ಖಳನಟರಾಗಿ ಅಭಿನಯಿಸುತ್ತಿರುವ ನಕುಲ್ಬಾಲಚಂದರ್ ಹಾಗೂ ಸುನೀಲ್ ಬೀರೂರು ಪಾಲ್ಗೊಂಡಿದ್ದರು.
ಎನ್.ವಿ.ಸುರೇಂದ್ರರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಮುರಳಿ ಬೋಡಾಪತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸತೀಶ್ಬಾಬು ಛಾಯಾಗ್ರಹಣ, ರವಿಅಲಾ ಸಂಗೀತ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಮಧುವಿಕಾ, ಜಯಪ್ರಕಾಶ್ ರೆಡ್ಡಿ, ಅಭಿನಯ ಶ್ರೀ, ನಟರಾಜ್, ನಕುಲ್, ಶಲೇತ್, ವಿಶ್ವನಾಥ್ ಲಂಕಾ, ಪ್ರಕೃತಿ ಗೌಡ ಮುಂತಾದವರಿದ್ದಾರೆ. ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯರಂಗರಾಜು ಅವರು ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.