Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರವಿ ಶ್ರೀವತ್ಸರೊಂದಿಗೆ 'ಹ್ಯಾಟ್ರಿಕ್ ಹೀರೋ' ಮತ್ತೆ ಫಿಕ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶಿವಣ್ಣ ಕೈಗೆ ಮಚ್ಚು ನೀಡಿ ತೆರೆಮೇಲೆ ರೌಡಿಗಳ ತಲೆಗಳನ್ನು ಚೆಂಡಾಡಿಸಿದ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ತೆರೆಯ ಮೇಲೆ ರಕ್ತದೋಕುಳಿ ನಡೆಸಿದ್ದ ಶಿವಣ್ಣ ಮುಖ್ಯ ಭೂಮಿಕೆಯಲ್ಲಿದ್ದ 'ಮಾದೇಶ' ಚಿತ್ರವನ್ನು ರವಿ ಶ್ರೀವತ್ಸ ಈ ಹಿಂದೆ ನಿರ್ದೇಶಿಸಿದ್ದರು.
ಅತಿಯಾದ ಹಿಂಸಾಚಾರವೇನೋ ತಿಳಿಯದು "ಹೋದಪುಟ್ಟ ಬಂದಪುಟ್ಟ" ಎನ್ನುವ ಹಾಗೆ 'ಮಾದೇಶ' ಚಿತ್ರ ಒಂದುವಾರ ಚಿತ್ರಮಂದಿರದಲ್ಲಿ ನಿಲ್ಲಲು ತಡಕಾಡಿದ್ದು ದುರಂತ. ಇದೀಗ ಈ ಜೋಡಿ ಮತ್ತೆ ಒಂದಾಗಿದೆ. ಶಿವರಾಜ್ ಕುಮಾರ್ ಅವರನ್ನು ಹಾಕಿಕೊಂಡು 'ಬಂಧುಬಳಗ' ಎನ್ನುವ ಇನ್ನೊಂದು ಫ್ಲಾಪ್ ಚಿತ್ರವನ್ನು ನಿರ್ಮಿಸಿದ್ದ ಸೂರಪ್ಪ ಬಾಬ್ ಈ ಚಿತ್ರಕ್ಕೆ ಹಣ ಸುರಿಯಲಿದ್ದಾರೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ಸೂರಪ್ಪಬಾಬು ನಿರ್ಮಿಸಿದ್ದ ಕೊನೆ ಚಿತ್ರ ಪುನೀತ್ ಅಭಿನಯದ 'ಪೃಥ್ವಿ' ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡ ನಂತರ ಸೂರಪ್ಪ ಸದ್ಯ ಬಚಾವ್ ಆಗಿದ್ದಾರೆ. ಈ ಚಿತ್ರಕ್ಕೆ ಮಹೂರ್ತ ಬರುವ ಜನವರಿ 30 ರಂದು ಎಂದು ನಿರ್ದೇಶಕ ರವಿ ಶ್ರೀವತ್ಸ ತಿಳಿಸಿದ್ದಾರೆ. [ಶಿವರಾಜ್ ಕುಮಾರ್]