Don't Miss!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರವಿ ಶ್ರೀವತ್ಸರೊಂದಿಗೆ 'ಹ್ಯಾಟ್ರಿಕ್ ಹೀರೋ' ಮತ್ತೆ ಫಿಕ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶಿವಣ್ಣ ಕೈಗೆ ಮಚ್ಚು ನೀಡಿ ತೆರೆಮೇಲೆ ರೌಡಿಗಳ ತಲೆಗಳನ್ನು ಚೆಂಡಾಡಿಸಿದ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕ್ಕೆ ಆಕ್ಷನ್, ಕಟ್ ಹೇಳಲಿದ್ದಾರೆ. ತೆರೆಯ ಮೇಲೆ ರಕ್ತದೋಕುಳಿ ನಡೆಸಿದ್ದ ಶಿವಣ್ಣ ಮುಖ್ಯ ಭೂಮಿಕೆಯಲ್ಲಿದ್ದ 'ಮಾದೇಶ' ಚಿತ್ರವನ್ನು ರವಿ ಶ್ರೀವತ್ಸ ಈ ಹಿಂದೆ ನಿರ್ದೇಶಿಸಿದ್ದರು.
ಅತಿಯಾದ ಹಿಂಸಾಚಾರವೇನೋ ತಿಳಿಯದು "ಹೋದಪುಟ್ಟ ಬಂದಪುಟ್ಟ" ಎನ್ನುವ ಹಾಗೆ 'ಮಾದೇಶ' ಚಿತ್ರ ಒಂದುವಾರ ಚಿತ್ರಮಂದಿರದಲ್ಲಿ ನಿಲ್ಲಲು ತಡಕಾಡಿದ್ದು ದುರಂತ. ಇದೀಗ ಈ ಜೋಡಿ ಮತ್ತೆ ಒಂದಾಗಿದೆ. ಶಿವರಾಜ್ ಕುಮಾರ್ ಅವರನ್ನು ಹಾಕಿಕೊಂಡು 'ಬಂಧುಬಳಗ' ಎನ್ನುವ ಇನ್ನೊಂದು ಫ್ಲಾಪ್ ಚಿತ್ರವನ್ನು ನಿರ್ಮಿಸಿದ್ದ ಸೂರಪ್ಪ ಬಾಬ್ ಈ ಚಿತ್ರಕ್ಕೆ ಹಣ ಸುರಿಯಲಿದ್ದಾರೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ಸೂರಪ್ಪಬಾಬು ನಿರ್ಮಿಸಿದ್ದ ಕೊನೆ ಚಿತ್ರ ಪುನೀತ್ ಅಭಿನಯದ 'ಪೃಥ್ವಿ' ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡ ನಂತರ ಸೂರಪ್ಪ ಸದ್ಯ ಬಚಾವ್ ಆಗಿದ್ದಾರೆ. ಈ ಚಿತ್ರಕ್ಕೆ ಮಹೂರ್ತ ಬರುವ ಜನವರಿ 30 ರಂದು ಎಂದು ನಿರ್ದೇಶಕ ರವಿ ಶ್ರೀವತ್ಸ ತಿಳಿಸಿದ್ದಾರೆ. [ಶಿವರಾಜ್ ಕುಮಾರ್]