Don't Miss!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬುದ್ಧಿವಂತ' ಉಪೇಂದ್ರರನ್ನು ಒಪ್ಪಿಕೊಂಡವರು ದಡ್ದರಲ್ಲ!
ಇದುವೆರೆಗೂ ಉಪೇಂದ್ರ ನಟಿಸಿದ ಚಿತ್ರಗಳಲ್ಲಿ 'ಬುದ್ಧಿವಂತ' ವಿಭಿನ್ನ ಚಿತ್ರ.ಜೊತೆಗೆ ಚಿತ್ರವಿಚಿತ್ರ ವೇಷಭೂಷಣಗಳಲ್ಲಿ ಉಪೇಂದ್ರ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಐವರು ನಟಿಯರೊಂದಿಗೆ (ಪೂಜಾಗಾಂಧಿ, ನೇಥನ್ಯಾ, ಸಲೋನಿ, ಸುಮನ್ ರಂಗನಾಥ್ ಹಾಗೂ ಬೃಂದಾ) ಸಿದ್ಧವಾಗಿರುವ 'ಬುದ್ಧಿವಂತ' ಜೂನ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಭೂಲೋಕದ ಸ್ವರ್ಗ ಕಾಶ್ಮೀರ ಹಾಗೂ ಚೀನಾದ ಸುಂದರ ಪರಿಸರಗಳಲ್ಲಿ ಚಿತ್ರೀಕರಣಗೊಂಡು ಈಗಾಗಲೇ ಡಿಟಿಎಸ್ ಕೆಲಸವನ್ನೂ ಮುಗಿಸಿಕೊಂಡಿದೆ. ಚಿತ್ರದ ಚಿತ್ರೀಕರಣ ಯಾವುದೇ ಜಂಜಾಟವಿಲ್ಲದೆ ಸುಸೂತ್ರವಾಗಿ ಸಾಗಿತು ಎನ್ನ್ನುತ್ತಾರೆ ನಿರ್ದೇಶಕ ರಾಮನಾಥ್ ಋಗ್ವೇದಿ.
''ಇಂದಿನ ಪ್ರೇಕ್ಷಕ ತುಂಬಾ ಬುದ್ಧಿವಂತ ಕಣ್ರಿ! ಹಾಗಾಗಿ ಚಿತ್ರದ ತೆರೆಮೇಲೆ ನಾನು ತುಂಬಾ ಬುದ್ಧಿವಂತನಾಗಿ ಕಾಣಿಸುತ್ತೇನೆ'' ಎನ್ನುತ್ತಾರೆ ನಟ ಉಪೇಂದ್ರ ''ಚಿತ್ರದ ಐದು ಹಾಡುಗಳನ್ನು ಐದು ವಿಭಿನ್ನ ಸೆಟ್ಗಳಲ್ಲಿ ಚಿ ತ್ರೀಕರಿಸಿದ್ದೇವೆ. ಬಾಲಿವುಡ್ ಚಿತ್ರದ ಗುಣಮಟ್ಟಕ್ಕೆ ತಕ್ಕಂತೆ ಬುದ್ಧಿವಂತ ತೆರೆಗೆ ಬರುತ್ತಿವೆ'' ಎನ್ನುತ್ತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ರಾಜೇಂದ್ರ ಸಿಂಗ್ ಬಾಬು.
ಕನ್ನಡ ಚಿತ್ರರಂಗದಲ್ಲಿ ಹೊಸ ಶೈಲಿಗೆ ನಾಂದಿ ಹಾಡಲಿದೆ ನಮ್ಮ 'ಬುದ್ಧಿವಂತ'. ಸಂಭಾಷಣೆ ಹಾಗೂ ದೃಶ್ಯಗಳೂ ಒಂದಕ್ಕೊಂದು ಹೇಗೆ ಮಿಳಿತವಾಗಿವೆ ಎಂದರೆ ಅದನ್ನು ತೆರೆಯ ಮೇಲೇ ನೋಡಿ ಆನಂದಿಸಬೇಕು! ಲೈಟ್ಬಾಯ್ನಿಂದ ಹಿಡಿದು ನಿರ್ದೇಶಕರ ತನಕ ಪ್ರತಿಯೊಬ್ಬರೂ ಬೆವರು ಸುರಿಸಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ನಿರ್ಮಾಪಕ ಮೋಹನ್.
''ನಟ
ಉಪೇಂದ್ರ
ಕೇವಲ
ನಿರ್ದೇಶಕರ
ನಟನಷ್ಟೇ
ಅಲ್ಲ
;
ನಿರ್ದೇಶಕರ
ನಿರ್ದೇಶಕ
ಹಾಗೂ
ನಿರ್ಮಾಪಕರ
ನಟ''
ಎಂಬ
ರಾಜೇಂದ್ರಸಿಂಗ್
ಬಾಬು
ಅವರ
ಮಾತಿನಲ್ಲಿ
ಎಷ್ಟು
ಜೊಳ್ಳೋ
ಎಷ್ಟು
ಹುರುಳೋ
ಚಿತ್ರ
ಬಿಡುಗಡೆಯಾದ
ಮೇಲೆ
ತಿಳಿಯಲಿದೆ.
ಕನ್ನಡದ
ಕುವರಿ
ಮೇಘನಾ
ತಮಿಳಿನಲ್ಲಿ
ಪಾದಾರ್ಪಣೆ
(ದಟ್ಸ್ಕನ್ನಡ ಸಿನಿವಾರ್ತೆ)