Don't Miss!
- News Lok Sabha Election 2024: ಬೆಂಗಳೂರಿನಲ್ಲಿ ಈ ದಿನಗಳಂದು ಮದ್ಯ ಮಾರಾಟ ಸಂಪೂರ್ಣ ನಿಷೇಧ-ಯಾವ್ಯಾವಾಗ ಹಾಗೂ ಕಾರಣವೇನು?
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ‘ಭಾವಶಿಲ್ಪಿ’, ಉಪ್ಪಿ ಶ್ರೇಷ್ಠನಟ
'ಕದಂಬ" ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಭಾವಪೂರ್ಣ ಅಭಿನಯ ನೋಡಿ ಈ ಬಿರುದು ಕೊಟ್ಟರಾ ? ಗೊತ್ತಿಲ್ಲ . ಆದರೆ, ಕಲಾವಿದರಾಗಿ ವಿಷ್ಣು ಪಕ್ವವಾಗುತ್ತಿರುವ ಸಂದರ್ಭದಲ್ಲಿ 'ಭಾವಶಿಲ್ಪಿ" ಬಿರುದು ಅವರಿಗೆ ಅನ್ವರ್ಥ. ಬಿರುದು ಕೊಟ್ಟವರು ಅಭಿಮಾನಿಗಳಲ್ಲ - ಪತ್ರಿಕೆ. 'ಹಲೋ ಗಾಂಧಿನಗರ್" ಸಿನಿಮಾ ಪತ್ರಿಕೆ.
ಹಲೋ ಗಾಂಧಿನಗರ್ ಸಿನಿ ಮಾಸ ಪತ್ರಿಕೆ ಕಳೆದ ಶುಕ್ರವಾರ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ , ಕನ್ನಡ ಚಿತ್ರರಂಗದ 2003ರ ಶ್ರೇಷ್ಠರನ್ನು ಗುರ್ತಿಸಿ ಗೌರವಿಸುವ ಅಪರೂಪದ ಸಮಾರಂಭ ಹಮ್ಮಿಕೊಂಡಿತ್ತು . ಕಳೆದ ವರ್ಷ ಕೂಡ ಗಾಂಧಿನಗರ ಪತ್ರಿಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿತ್ತು . ಈ ಬಾರಿಯದು ಚೊಕ್ಕ ಸಮಾರಂಭ, ಚಿಕ್ಕ ಸಮಾರಂಭ. ಪತ್ರಿಕೆಯ ಸಂಪಾದಕ ನಂದಕುಮಾರ್ ಹಾಗೂ ಅವರ ಶ್ರೀಮತಿ ವರಲಕ್ಷ್ಮಿ ಕೈವಾಡ ಕಾರ್ಯಕ್ರಮದ ಯಶಸ್ಸಿನಲ್ಲಿ ಎದ್ದುಕಾಣುತ್ತಿತ್ತು .
2003ರ 'ಹಲೋ ಗಾಂಧಿನಗರ್" ಪ್ರಶಸ್ತಿಗಳನ್ನು ಪಡೆದ ಪ್ರಮುಖರು :
ಅತ್ಯುತ್ತಮ
ನಟ
:
ಉಪೇಂದ್ರ
(ರಕ್ತ
ಕಣ್ಣೀರು)
ಅತ್ಯುತ್ತಮ
ನಟಿ
:
ಅಭಿರಾಮಿ
(ಲಾಲಿಹಾಡು)
ಅತ್ಯುತ್ತಮ
ನಿರ್ದೇಶಕ
:
ಎಸ್.ನಾರಾಯಣ್
(ಚಂದ್ರಚಕೋರಿ)
ಉದಯೋನ್ಮುಖ
ನಟ
:
ಮುರಳಿ
(ಚಂದ್ರ
ಚಕೋರಿ)
ಉದಯೋನ್ಮುಖ
ನಟಿ
:
ರಮ್ಯ
(ಅಭಿ
ಮತ್ತು
ಎಕ್ಸ್ಕ್ಯೂಸ್
ಮಿ)
ವಿಶೇಷ
ಪ್ರಶಸ್ತಿಗಳು
:
ಶಿವರಾಜ್ಕುಮಾರ್
(ಚಿಗುರಿದ
ಕನಸು),
ದರ್ಶನ್
(ನಮ್ಮ
ಪ್ರೀತಿಯ
ರಾಮು)
ಮತ್ತು
ಸುದೀಪ್
(ಸ್ವಾತಿಮುತ್ತು
).
ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಜಯಂತಿ ಅವರಿನ್ನು ಸಮಗ್ರ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಷ್ಣುವರ್ಧನ್ ಅವರಿಗೆ 'ಭಾವಶಿಲ್ಪಿ" ಬಿರುದು ನೀಡಿ ಗೌರವಿಸಲಾಯಿತು. ಫಲಪುಷ್ಪ , ಶಾಲು, ಕೃಷ್ಣನ ಪ್ರತಿಮೆ ಹಾಗೂ ಬೆಳ್ಳಿಯ ಕಿರೀಟ ತೊಡಿಸಿ ವಿಷ್ಣುವರ್ಧನ್ ಅವರನ್ನು ಸನ್ಮಾನಿಸಿದಾಗ ಅಭಿಮಾನಿಗಳಿಂದ ಭಾರ ಕರತಾಡನ.
ಅಭಿನಂದನೆಗೆ ಪ್ರತಿಕ್ರಿಯಿಸಿದ ವಿಷ್ಣುವರ್ಧನ್- ತಮ್ಮೆಲ್ಲ ಸಾಧನೆಯ ದೇವರು ಹಾಗೂ ಅಭಿಮಾನಿಗಳ ಅನುಗ್ರಹ ಎಂದರು. 'ಭಾವಶಿಲ್ಪಿ" ಬಿರುದು ತಮ್ಮ ಭುಜಗಳಿಗೆ ಭಾರವಾಗುತ್ತಿದೆ ಎಂದು ವಿನೀತಭಾವದಿಂದ ನುಡಿದರು.