Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ದುನಿಯಾ’ ನಂತರ ವಿಜಯ್ ‘ಯುಗ’ ಶುರು!
ವಿಜಯ್ ಮುಂದೆ ಸಾಕಷ್ಟು ಅವಕಾಶಗಳಿವೆ. ಎಲ್ಲವನ್ನೂ ಪಕ್ಕಕ್ಕಿಟ್ಟು ಅವರು ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರ ‘ಯುಗ’. ಈ ಚಿತ್ರಕ್ಕೆ ಕತೆಯೇ ಜೀವಾಳವಂತೆ. ಹೀಗಾಗಿ ಕತೆಯ ಒಂದು ಎಳೆಯನ್ನೂ ಸಹಾ ಚಿತ್ರತಂಡ ಬಿಚ್ಚಿಡಲಿಲ್ಲ!
ಹಲವು ಕೇಂದ್ರಗಳಲ್ಲಿ ‘ಮುಂಗಾರುಮಳೆ’ ಚಿತ್ರಕ್ಕೆ ಸಾಟಿಯಾಗಿ ಹಣಕೊಳ್ಳೆಹೊಡೆಯುತ್ತಿರುವ ಮತ್ತೊಂದು ಚಲನಚಿತ್ರ ‘ದುನಿಯಾ’. ಇದರ ನಾಯಕ ವಿಜಯ್ ಕೈತುಂಬಾ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಮಧ್ಯೆ ವಿಜಯ್ ‘ಯುಗ’ ಎಂಬ ಹೊಸ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
‘ದುನಿಯಾ’ ಚಿತ್ರದಲ್ಲಿ ನಿರ್ದೇಶಕ ಸೂರಿ ಅವರಿಗೆ ಸಹನಿರ್ದೇಶಕರಾಗಿ ಕೆಲಸಮಾಡಿದ್ದ ಚಂದ್ರ, ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕೈಹಾಕಿದ್ದಾರೆ.
ಅಂದಹಾಗೆ, ಒಂದರ್ಥದಲ್ಲಿ ‘ಯುಗ’ ಅಸೋಸಿಯೇಟ್ಗಳ ಚಿತ್ರ. ‘ದುನಿಯಾ’ ಚಿತ್ರದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್ ಅವರಿಗೆ ಅಸೋಸಿಯೇಟ್ ಆಗಿ ದುಡಿದಿದ್ದ ಅರ್ಜುನ್, ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಡುತ್ತಿದ್ದಾರೆ.
ಉದಯ ಹಾಗೂ ಉದಯ2 ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ಕಾವ್ಯಾ, ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೈಕೋ ನಾಗರಾಜ್, ಸುಧಾ ಬೆಳವಾಡಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ದೇಶಕ ಚಂದ್ರ ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ, ಕಥೆ ಬಗ್ಗೆ ಏನೇನೂ ಹೇಳಲಿಲ್ಲ. ಆದರೆ ಚಿತ್ರೀಕರಣ ಹಾಗೂ ಚಿತ್ರದ ಸಂಗೀತದ ಬಗ್ಗೆ ಮಾತ್ರ ವಿವರ ನೀಡಿದರು. ಚಿತ್ರದ ನಾಯಕ ವಿಜಯ್ ನಾಲ್ಕೇ ಮಾತುಗಳನ್ನಾಡಿ, ತಾವು ಈ ಚಿತ್ರದಲ್ಲಿ ಹಲವು ಕಠಿಣ ಸಾಹಸ ದೃಶ್ಯಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಕಥೆಯೇ ಚಿತ್ರದ ಜೀವಾಳ ಎಂಬುದನ್ನು ಹೇಳಲು ಮರೆಯಲಿಲ್ಲ.