twitter
    For Quick Alerts
    ALLOW NOTIFICATIONS  
    For Daily Alerts

    ತಿಂಗಳ ಕೊನೆಗೆ ಸಾವಿತ್ರಿ, ಗಣೇಶಗೆ ಗಣೇಶನೇ ವೈರಿ!

    By Staff
    |

    ಸ್ಯಾಂಡಲ್‌ವುಡ್ ಸುದ್ದಿ ಖಜಾನೆ... ಗರಿಗರಿ.. ಪುಡಿಪುಡಿ ಸುದ್ದಿಗಳು...

    ಸತ್ಯವಾನ್ ಸಾವಿತ್ರಿ ಚಿತ್ರ ಜೂ.29ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ತಿಂಗಳ ಕೊನೆಯಲ್ಲಿ ನಗೆಹಬ್ಬ! ರಮೇಶ್ ಮ್ಯಾಜಿಕ್ ನೋಡಲು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ರಮೇಶ್ ಅಂತೂ, ಈ ಚಿತ್ರ ಚೆನ್ನಾಗಿದೆ ಅಂತ ದೇವರ ಮೇಲೆ ಆಣೆ-ಪ್ರಮಾಣ ಮಾಡುತ್ತಿದ್ದಾರೆ.

    ***

    ಗಣೇಶನ ಚಿತ್ರಗಳಿಗೆ ಅವನ ಚಿತ್ರಗಳೇ ವೈರಿಗಳು! ಈಗಾಗಲೇ ಮುಂಗಾರು ಮಳೆ, ಹುಡುಗಾಟಚಿತ್ರಗಳು ತೆರೆಯಲ್ಲಿವೆ. ಈವಾರ ಚೆಲುವಿನ ಚಿತ್ತಾರ ಬಿಡುಗಡೆಯಾಗಿದೆ. ಮೆಜೆಸ್ಟಿಕ್ ತುಂಬ ಗಣೇಶ್ ಚಿತ್ರಗಳೇ.. ಹೀಗಾದರೆ ಕಷ್ಟ..

    ***

    ಸುವರ್ಣ ಹೆಸರಿನ ಕನ್ನಡ ಚಾನೆಲ್ ಕಳೆದ ವಾರವಷ್ಟೇ ಆರಂಭವಾಗಿದೆ. ಇತ್ತೀಚೆಗಷ್ಟೇ ತೆರೆಕಂಡ ಹೊಚ್ಚಹೊಸ ಚಿತ್ರ ಅಮೃತವಾಣಿ , ಶುಕ್ರವಾರ(ಜೂ.22)ಈ ಚಾನೆಲ್ ನಲ್ಲಿ ಪ್ರಸಾರವಾಯಿತು. ಸ್ಪರ್ಧೆ ಜೋರಾಗಿದೆ. ಮುಂದೆ ಹೇಗೋ?

    ***

    ಪಲ್ಲಕ್ಕಿ ಈ ವಾರ ಅರ್ಧ ಸೆಂಚುರಿ ಪೂರೈಸಿದೆ. ಇನ್ನೈವತ್ತು ದಿನ ಓಡಿದರೆ, ನೆನಪಿರಲಿಪ್ರೇಮ್, ಹ್ಯಾಟ್ರಿಕ್ ಹೀರೋ.

    ***

    ಮೀರಾ ಮಾಧವ ರಾಘವ ಹದಿನಾರಣೆ ಕನ್ನಡ ಸಿನಿಮಾ. ಇದು ಅಪ್ಪಟ ಕನ್ನಡಿಗರ ಸಿನಿಮಾ ಎಂದು ನಿರ್ದೇಶಕ ಟಿ.ಎನ್.ಸೀತಾರಾಂ ಘೋಷಿಸಿದ್ದಾರೆ. ಜು.27ಕ್ಕೆ ಚಿತ್ರ ಬಿಡುಗಡೆ. ಹಂಸಲೇಖ ಸಂಗೀತ ಚಿತ್ರದ ವಿಶೇಷ.

    ***

    ತಿಮ್ಮಚಿತ್ರ ತೋಪಾದ ನಂತರ ಸಾಗರ್ ಜೋಡಿಯನ್ನು ನಂಬಿದ್ದ ನಿರ್ಮಾಪಕ ಸಂಪತ್ ಕುಮಾರ್ ಕಂಗೆಟ್ಟಿದ್ದರು. ಈಗ ಮತ್ತೆ ಹೊಸ ಆಸೆಯೊಂದಿಗೆ ಚೆನ್ನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜೂನಿಯರ್ ಶಂಕರ್ ನಾಗ್ ದೀಪಕ್ ಚಿತ್ರದ ನಾಯಕ. ರಜನೀಕಾಂತ್ ಆತ್ಮೀಯ ಗೆಳೆಯ ರಾಜಬಹದ್ದೂರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

    ***

    Thursday, April 25, 2024, 6:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X