Don't Miss!
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಿಂಗಳ ಕೊನೆಗೆ ಸಾವಿತ್ರಿ, ಗಣೇಶಗೆ ಗಣೇಶನೇ ವೈರಿ!
ಸ್ಯಾಂಡಲ್ವುಡ್ ಸುದ್ದಿ ಖಜಾನೆ... ಗರಿಗರಿ.. ಪುಡಿಪುಡಿ ಸುದ್ದಿಗಳು...
ಸತ್ಯವಾನ್ ಸಾವಿತ್ರಿ ಚಿತ್ರ ಜೂ.29ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ತಿಂಗಳ ಕೊನೆಯಲ್ಲಿ ನಗೆಹಬ್ಬ! ರಮೇಶ್ ಮ್ಯಾಜಿಕ್ ನೋಡಲು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ರಮೇಶ್ ಅಂತೂ, ಈ ಚಿತ್ರ ಚೆನ್ನಾಗಿದೆ ಅಂತ ದೇವರ ಮೇಲೆ ಆಣೆ-ಪ್ರಮಾಣ ಮಾಡುತ್ತಿದ್ದಾರೆ.
***
ಗಣೇಶನ ಚಿತ್ರಗಳಿಗೆ ಅವನ ಚಿತ್ರಗಳೇ ವೈರಿಗಳು! ಈಗಾಗಲೇ ಮುಂಗಾರು ಮಳೆ, ಹುಡುಗಾಟಚಿತ್ರಗಳು ತೆರೆಯಲ್ಲಿವೆ. ಈವಾರ ಚೆಲುವಿನ ಚಿತ್ತಾರ ಬಿಡುಗಡೆಯಾಗಿದೆ. ಮೆಜೆಸ್ಟಿಕ್ ತುಂಬ ಗಣೇಶ್ ಚಿತ್ರಗಳೇ.. ಹೀಗಾದರೆ ಕಷ್ಟ..
***
ಸುವರ್ಣ ಹೆಸರಿನ ಕನ್ನಡ ಚಾನೆಲ್ ಕಳೆದ ವಾರವಷ್ಟೇ ಆರಂಭವಾಗಿದೆ. ಇತ್ತೀಚೆಗಷ್ಟೇ ತೆರೆಕಂಡ ಹೊಚ್ಚಹೊಸ ಚಿತ್ರ ಅಮೃತವಾಣಿ , ಶುಕ್ರವಾರ(ಜೂ.22)ಈ ಚಾನೆಲ್ ನಲ್ಲಿ ಪ್ರಸಾರವಾಯಿತು. ಸ್ಪರ್ಧೆ ಜೋರಾಗಿದೆ. ಮುಂದೆ ಹೇಗೋ?
***
ಪಲ್ಲಕ್ಕಿ ಈ ವಾರ ಅರ್ಧ ಸೆಂಚುರಿ ಪೂರೈಸಿದೆ. ಇನ್ನೈವತ್ತು ದಿನ ಓಡಿದರೆ, ನೆನಪಿರಲಿಪ್ರೇಮ್, ಹ್ಯಾಟ್ರಿಕ್ ಹೀರೋ.
***
ಮೀರಾ ಮಾಧವ ರಾಘವ ಹದಿನಾರಣೆ ಕನ್ನಡ ಸಿನಿಮಾ. ಇದು ಅಪ್ಪಟ ಕನ್ನಡಿಗರ ಸಿನಿಮಾ ಎಂದು ನಿರ್ದೇಶಕ ಟಿ.ಎನ್.ಸೀತಾರಾಂ ಘೋಷಿಸಿದ್ದಾರೆ. ಜು.27ಕ್ಕೆ ಚಿತ್ರ ಬಿಡುಗಡೆ. ಹಂಸಲೇಖ ಸಂಗೀತ ಚಿತ್ರದ ವಿಶೇಷ.
***
ತಿಮ್ಮಚಿತ್ರ ತೋಪಾದ ನಂತರ ಸಾಗರ್ ಜೋಡಿಯನ್ನು ನಂಬಿದ್ದ ನಿರ್ಮಾಪಕ ಸಂಪತ್ ಕುಮಾರ್ ಕಂಗೆಟ್ಟಿದ್ದರು. ಈಗ ಮತ್ತೆ ಹೊಸ ಆಸೆಯೊಂದಿಗೆ ಚೆನ್ನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜೂನಿಯರ್ ಶಂಕರ್ ನಾಗ್ ದೀಪಕ್ ಚಿತ್ರದ ನಾಯಕ. ರಜನೀಕಾಂತ್ ಆತ್ಮೀಯ ಗೆಳೆಯ ರಾಜಬಹದ್ದೂರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.
***