For Quick Alerts
For Daily Alerts
Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಂತ್ ನಾಗ್ ನಾಯಕತ್ವದಲ್ಲಿ ಸಕತ್ ಕಚಗುಳಿ!
News
-Staff
By Staff
|
ಈಚೀಚೆಗೆ ಕಾಮಿಡಿ ಟ್ರೆಂಡ್ ಹೆಚ್ಚುತ್ತಿದೆ. ಸತ್ಯವಾನ ಸಾವಿತ್ರಿ, ತಮಾಷೆಗಾಗಿ ನಂತರ ಇನ್ನೊಂದು ಕಾಮಿಡಿ ಸಿನಿಮಾ ಸೆಟ್ಟೇರುತ್ತಿದೆ.
ಪ್ರತಿ ರಾತ್ರಿ ಈಟೀವಿಯಲ್ಲಿ 9.30ಕ್ಕೆ ಪ್ರೀತಿ ಇಲ್ಲದ ಮೇಲೆಧಾರಾವಾಹಿ ಮುಖಾಂತರ, ಕಿರುತೆರೆ ವೀಕ್ಷಕರನ್ನು ಅನಂತನಾಗ್ ಮುಖಾಮುಖಿಯಾಗುತ್ತಿದ್ದಾರೆ. ಆದರೂ ಅವರು ಹಿರಿತೆರೆಯನ್ನೂ ಮರೆತಿಲ್ಲ.ಅವರ ಹೊಸ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.
ದಿನೇಶ್ ಬಾಬು ನಿರ್ದೇಶನದ ಹೊಸ ಕಾಮಿಡಿ ಚಿತ್ರಕ್ಕೆ ಅನಂತನಾಗ್ ನಾಯಕ ನಟರಾಗಿ ಆಯ್ಕೆಯಾಗಿದ್ದಾರೆ. ಕೇವಲ 12ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ದಿನೇಶ್ ಬಾಬು ತಯಾರಿಸಿದ್ದಾರೆ.
ಈ ಹಿಂದೆ ಗಣೇಶ, ನಂತರ ರೋಲ್ ಕಾಲ್ ಮತ್ತು ಗೋಲ್ ಮಾಲ್ ಸರಣಿ ಅನಂತನಾಗ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಪ್ರೇಕ್ಷಕರಿಗೆ ಕಚಗುಳಿಯಿಟ್ಟು ಅವರು ನಗಿಸಿದ್ದರು. ತಾವು ಗಂಭೀರ ನಟ ಮಾತ್ರವಲ್ಲ, ಅವಕಾಶ ಸಿಕ್ಕರೇ ಪ್ರೇಕ್ಷಕರು ಬಿದ್ದುಬಿದ್ದು ನಗುವಂತೆ ಮಾಡುತ್ತೇವೆ ಎಂಬುದನ್ನು ಅನಂತನಾಗ್ ಸಿಕ್ಕ ಅವಕಾಶಗಳ ಮುಖಾಂತರ ಸಾಬೀತುಪಡಿಸಿದ್ದಾರೆ.
ಅಮೃತವಾಹಿಣಿ, ನಾನೇನು ಮಾಡ್ಲಿಲ್ಲ, ಚಿಟ್ಟೆ, ಲಾಲಿ ಮತ್ತಿತರ ದಿನೇಶ್ ಬಾಬು ಅವರ ಕನ್ನಡ ಚಿತ್ರಗಳು ಪ್ರೇಕ್ಷಕರ ಮನಗೆದ್ದಿವೆ. ಅನಂತ್ ಮತ್ತು ದಿನೇಶ್ ಜೋಡಿಯ ಕರಾಮತ್ತು ಕಾಣಲು ಪ್ರೇಕ್ಷಕರಂತೂ ಕಾತರಗೊಂಡಿದ್ದಾರೆ. ಫಲಿತಾಂಶ ಕಾದು ನೋಡೋಣ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, November 20, 2002, 5:30 [IST]
Other articles published on Nov 20, 2002