Don't Miss!
- Finance ಅನಂತ್ ಅಂಬಾನಿ ರಾಧಿಕ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಖರ್ಚಾದ ಹಣ?
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಮದುವೆಯಾಗಿರುವ ನಾನು ಚಿತ್ರಗಳಲ್ಲಿ ನಟಿಸಬೇಕಾ? ಬೇಡವಾ?’
ಅನು ಪ್ರಭಾಕರ್ ಕೈ ಮೂಳೆ ಮುರಿದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಷಯ ಚಿತ್ರರಂಗದಲ್ಲಾಗಲೀ ಅಥವಾ ಮಾಧ್ಯಮಗಳಲ್ಲಾಗಲೀ ದೊಡ್ಡ ಸುದ್ದಿಯಿರಲಿ ; ಬಾಯಿ ಮಾತಿನ ವಿಷಯವೂ ಆಗಿಲ್ಲ. ಏಕೆಂದರೆ ಅನು ಕೈಯಲ್ಲೀಗ ಹೆಚ್ಚಿನ ಚಿತ್ರಗಳಿಲ್ಲ. ಆಕೆ ಚಾಲ್ತಿಯಲ್ಲಿರುವ ನಟಿ ಅಲ್ಲ.
ರಾಧಿಕಾ, ರಕ್ಷಿತಾ, ಋತಿಕಾ ಮುಂತಾದ ಹೊಸ ಹುಡುಗಿಯರ ಬಿಡು ಬೀಸಿನ ಮೆರೆದಾಟದಲ್ಲಿ ಅನು ಪ್ರಭಾಕರ್ಗೆ ಮನೆ ಕೆಲಸಕ್ಕೆ ಹಾಗೂ ಪತಿಸೇವೆಗೆ ಹೆಚ್ಚಿನ ಬಿಡುವು ದೊರೆತಿದೆ. ಅವಕಾಶಗಳು ಕಡಿಮೆಯಾದದ್ದಕ್ಕೆ ಮದುವೆಯೇ ಕಾರಣ ಎಂದು ದೂರುವಂತಿಲ್ಲ. ಮದುವೆಯಾದ ಹೊಸತರಲ್ಲಿ ಅವಕಾಶಗಳು ಅನು ಅವರನ್ನು ಅರಸಿಕೊಂಡು ಬಂದವು. ಆದರೆ, ಅಷ್ಟೇ ಬೇಗ ಅವರು ನಿರುದ್ಯೋಗಿಯಾದರು. ಹೊಸ ನೀರಿನ ಅಬ್ಬರ ಅಂತಾದ್ದು.
ಅಂದಹಾಗೆ, ಅನು ಕೈ ಮುರಿದುಕೊಂಡಿದ್ದು ಎಲ್ಲಿ ? ಶೂಟಿಂಗ್ನಲ್ಲಂತೂ ಅಲ್ಲ. ಇನ್ನು ಗಂಡ ಕೃಷ್ಣ ಕುಮಾರ್ ಜೊತೆ ಜಗಳ ಆಡಿದರಾ? ಪಾಪ ಪಾಂಡು ಥರದ ಕೃಷ್ಣಕುಮಾರ್ ಜಗಳ ಆಡುವ, ಕೈ ಮುರಿಯುವ ಟೈಪಿನ ಗಂಡನಲ್ಲ. ಹಾಗಿದ್ದರೆ ಕೈ ಮುರಿದದ್ದು ಎಲ್ಲಿ ? ಬಚ್ಚಲಲ್ಲಿ ಜಾರಿ ಬಿದ್ದರಾ ?
ಅನು ಪ್ರಭಾಕರ್ ಕೈ ಮುರಿದುಕೊಂಡಿದ್ದು ಗೋವಾದಲ್ಲಿ. ಇತ್ತೀಚೆಗೆ ಪತಿ ಸಮೇತ ಗೋವಾಕ್ಕೆ ಹೋಗಿದ್ದ (ಶೂಟಿಂಗ್ಗೆ ಅಲ್ಲ ) ಅನು ಪ್ರಭಾಕರ್, ಬೀಚೊಂದರಲ್ಲಿ ಬಿದ್ದು ಗಾಯ ಮಾಡಿಕೊಂಡರು. ವೈದ್ಯರು ಕೈ ಮುರಿದಿದೆ ಎಂದು ಬ್ಯಾಂಡೇಜ್ ಕಟ್ಟಿದ್ದಾರೆ. ಹಾಗಾಗಿ ಅನೂಗೆ ಕಡ್ಡಾಯ ವಿಶ್ರಾಂತಿ!