Don't Miss!
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಸರ್ಗದ ಮಡಿಲಲ್ಲಿ ಚಿರಂಜೀವಿ, ಕೃತಿ ಡ್ಯುಯಟ್
ಸದಾ ಹಚ್ಚಹಸಿರಿನಿಂದ ಕಂಗೊಳಿಸುವ, ನಿಸರ್ಗ ಮಾತೆಯ ತವರುಮನೆಯಂತಿರುವ ಸಕಲೇಶಪುರದಲ್ಲಿ ಮಾರ್ಸ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಚಿರು' ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿದೆ. ಮಹೇಶ್ಬಾಬು ರಚಿಸಿರುವ 'ಒಲವನ್ನು ಹೇಳು ಬಾರೋ ಒಲವನ್ನು ಸೇರು ಬಾರೋ' ಎಂಬ ಗೀತೆಯ ಚಿತ್ರೀಕರಣದಲ್ಲಿ ಚಿರಂಜೀವಿಸರ್ಜಾ ಹಾಗೂ ಕೃತಿ ಪಾಲ್ಗೊಂಡಿದ್ದರು. ಹರ್ಷ ಈ ಗೀತೆ ನೃತ್ಯ ಸಂಯೋಜಿಸಿದ್ದಾರೆ.
ಈ ಹಾಡನ್ನು ರಚಿಸುವ ಮೂಲಕ ನಿರ್ದೇಶಕ ಮಹೇಶ್ಬಾಬು ಗೀತರಚನೆಕಾರರಾಗೂ ಪರಿಚಿತರಾಗುತ್ತಿದ್ದಾರೆ. ಚಿತ್ರಕ್ಕೆ ಮೂರು ಹಾಡಿನ ಚಿತ್ರೀಕರಣ ಹಾಗೂ ರೈಲಿನಲ್ಲಿ ನಡೆಯಬೇಕಾಗಿರುವ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಉಳಿದ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೆಶಕರಾದ ಮಹೇಶ್ಬಾಬು.
ಸುರೇಶ್ಜೈನ್ ನಿರ್ಮಿಸುತ್ತಿರುವ 'ಚಿರು' ಚಿತ್ರಕ್ಕೆ ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸ್ವಾಮೀಜಿ ಕಥೆ, ಸುಂದರನಾಥಸುವರ್ಣ ಛಾಯಾಗ್ರಹಣ, ಗಿರಿಧರ್ ಸಂಗೀತ, ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ರವಿವರ್ಮ ಸಾಹಸ, ಮುರುಳಿ, ಹರ್ಷ ನೃತ್ಯ ಸಂಯೋಜನೆಯಿದೆ. 'ಚಿರು' ಚಿತ್ರದ ತಾರಾಬಳಗದಲ್ಲಿ ಚಿರಂಜೀವಿಸರ್ಜಾ, ಕೃತಿ, ರಂಗಾಯಣರಘು, ಪದ್ಮಾವಾಸಂತಿ, ಬುಲೆಟ್ಪ್ರಕಾಶ್, ಕಿರಣ್(ಹಾಗೆಸುಮ್ಮನೆ), ಪಿ.ಎನ್.ಸತ್ಯ, ನರಸಿಂಹಜೋಶಿ ಮುಂತಾದವರಿದ್ದಾರೆ.