Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನ್ನದ ಮೇಲೆ ಅಪಾರ ಗೌರವ ಹೊಂದಿದ್ದ ಡಾ ರಾಜ್
ಇಂದು (24 ಏಪ್ರಿಲ್ 2012) ಕನ್ನಡದ ಮೇರು ನಟ, ಅಣ್ಣಾವ್ರು ಡಾ ರಾಜ್ ಕುಮಾರ್ ಹುಟ್ಟುಹಬ್ಬ. ಅದನ್ನು ಯಾರಿಗೂ ನೆನಪಿಸುವ ಅಗತ್ಯವೇ ಇಲ್ಲದಷ್ಟು ಜನಪ್ರಿಯವಾಗಿದೆ ಈ ದಿನ. ಡಾ ರಾಜ್ ಹುಟ್ಟುಹಬ್ಬವನ್ನು ನಾಡಹಬ್ಬದಂತೆ ನಾಡಿನ ತುಂಬೆಲ್ಲ ಆಚರಿಸಲಾಗುತ್ತಿದೆ. ಅವರ ಮೇರು ವ್ಯಕ್ತಿತ್ವದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರು ಮಾದರಿ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಘಟನೆಗಳು ಜನಜನಿತವಾಗಿವೆ.
ಅದರಲ್ಲೊಂದು ಡಾ ರಾಜ್ ಅವರಿಗೆ ಅನ್ನದ ಮೇಲಿದ್ದ ಅಪಾರ ಗೌರವ. ಅದಕ್ಕೊಂದು ಉದಾಹರಣೆ ಇಲ್ಲಿದೆ...ಒಮ್ಮೆ ಡಾ ರಾಜ್, ಮಕ್ಕಳಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಹಾಗೂ ಇತರ ಕೆಲವರ ಜೊತೆ ಅಮೇರಿಕಕ್ಕೆ ಹೋಗಿದ್ದರು. ಮೊದಲ ಐದಾರು ದಿನ ಅವರಿಗೆ ಅನ್ನ ಸಿಕ್ಕಲಿಲ್ಲ. ಕೊನೆಗೊಂದು ದಿನ ಅನ್ನ ಸಿಗುತ್ತದೆ ಎಂದು ತಿಳಿದಾಗ ಐದಾರು ಪ್ಲೇಟ್ ಹೆಚ್ಚಿಗೆ ಹೇಳಿದ್ದರು.
ತಂದ ಮೇಲೆ ನೊಡಿದರೆ ಅನ್ನ ಹಳಸಿದೆ, ತಿನ್ನುವುದಿರಲಿ, ಬಾಯಿ ಹತ್ತಿರಕ್ಕೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದಷ್ಟು ಹಳಸಿದೆ. ಶಿವಣ್ಣ, ರಾಘಣ್ಣ ಅದನ್ನು ಮುಟ್ಟಲಿಲ್ಲ. ಆದರೆ ರಾಜ್ ಎಲ್ಲರನ್ನೂ ಒಮ್ಮೆ ನೋಡಿ ಐದಾರು ಪ್ಲೇಟ್ ಅನ್ನವನ್ನು ತಿಂದರು. ಮುಖದಲ್ಲಿ ಯಾವ ಕೆಡುಕಿನ ಭಾವವನ್ನೂ ತಾಳದೇ ಅನ್ನಕ್ಕೆ ಬೆಲೆ ಕೊಡುವ ರೀತಿಯಲ್ಲಿ ಅದನ್ನು ತಿಂದು ಮಂದಹಾಸ ಬೀರಿದರು.
ಅವರಿಗಿದ್ದ ಅನ್ನದ ಮೇಲಿನ ಗೌರವಕ್ಕೆ ಇದೊಂದು ದೃಷ್ಟಾಂತ ಅಷ್ಟೇ. ಯಾವತ್ತೂ ಅನ್ನಕ್ಕೆ ಬೆಲೆಕೊಟ್ಟವರು ಅಣ್ಣಾವ್ರು. ಅದನ್ನು ಪ್ರಚಾರಕ್ಕಾಗಲೀ ದೊಡ್ಡಸ್ತಿಕೆ ತೋರಿಸಿಕೊಳ್ಳಲಿಕ್ಕಾಗಲೀ ಎಂದೂ ಮಾಡಿದವರಲ್ಲ. ಅಷ್ಟು ದೊಡ್ಡ ಮನಸ್ಸು ಇದ್ದುದರಿಂದಲೇ ಇಷ್ಟು ಎತ್ತರಕ್ಕೆ ಬೆಳೆದವರು ಡಾ ರಾಜ್ ಕುಮಾರ್.