Don't Miss!
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶೃಂಗಾರಕಾವ್ಯ' ನಟ ರಘುವೀರ್ ವೇಶ್ಯಾಗೃಹದಲ್ಲಿ ಸೆರೆ
ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಫೈವ್ ಲೈಟ್ ವೃತ್ತದ ಬಳಿ ಇರುವ ಅಭಿಷೇಕ್ ಲಾಡ್ಜ್ ನಲ್ಲಿ ನಟ ರಘುವೀರ್ ಸೇರಿದಂತೆ ಅವರ ಸ್ನೇಹಿತರು ಉಳಿದುಕೊಂಡಿದ್ದರು. ಮದಿರೆ ನಶೆ, ಮಾನಿನಿಯರ ಸಂಘದಲ್ಲಿ ಮೈಮರೆತ್ತಿದ್ದ ಈ ಗುಂಪು ಒಮ್ಮೆಗೆ ಪೊಲೀಸರನ್ನು ಕಂಡು ಬೆಚ್ಚು ಬಿದ್ದಿದೆ. ರಘುವೀರ್ ಇಂದು ಸಂಜೆವರೆಗೂ ನ್ಯಾಯಾಂಗ ಬಂಧನದಲ್ಲಿರಿಸಲಾಗುವುದು ಎಂದು ಇನ್ಸ್ ಪೆಕ್ಟರ್ ರಾಜಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿರುವ ಪೂರ್ಣಿಯಾ, ಗೀತಪ್ರಿಯ ಅವರನ್ನು ಹಣಕೊಟ್ಟು ಮೈಸೂರಿಗೆ ಕರೆಸಿಕೊಳ್ಳಲಾಗಿತ್ತು. ಕಳೆದ ರಾತ್ರಿ ಕುಡಿಯಲು ಶುರು ಮಾಡಿದ ರಘುವೀರ್ ಬೆಳಗ್ಗೆವರೆಗೂ ಕುಡಿತ ಮುಂದುವರೆಸಿದ್ದಾರೆ. ಪೊಲೀಸರು ಬಂದು ಬಂಧಿಸಿದರೂ ಅದರ ಅರಿವು ಅವರಿಗಿರಲ್ಲ. ರಘುವೀರ್ ಅವರ ಸ್ನೇಹಿತ ಶಂಕರ್, ಕಾರು ಡ್ರೈವರ್ ಅನ್ನು ಸೆರೆ ಹಿಡಿಯಲಾಗಿದೆ ಎಂದು ಇನ್ಸ್ ಪೆಕ್ಟರ್ ರಾಜಣ್ಣ ಹೇಳಿದರು.
ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಮುಂತಾದ ಚಿತ್ರಗಳ ನಂತರ ಹಲವು ವರ್ಷಗಳ ಕಾಲ ರಘುವೀರ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಮತ್ತೆ ಬಣ್ಣ ಹಚ್ಚಿ, ಉಯ್ಯಾಲೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಾಂಸಾರಿಕ ತೊಂದರೆಯಿಂದಾಗಿ ಕೆಲ ವರ್ಷಗಳಿಂದ ಮದ್ಯ ವ್ಯಸನಿಯಾಗಿದ್ದ ರಘುವೀರ್, ಲೈಂಗಿಕತೆಗಾಗಿ ವೇಶ್ಯಾವೃತ್ತಿಯಲ್ಲಿರುವ ಯುವತಿಯರ ಹಿಂದೆ ಬಿದ್ದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.[ರಘುವೀರ್]