Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿನಲ್ಲಿ ದರ್ಶನ್ರನ್ನು ಭೇಟಿ ಮಾಡಲಿರುವ ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಸ್ಪರ ಭೇಟಿಯಾಗುವಂತಹ ಕಾಕತಾಳೀಯ ಸನ್ನಿವೇಶವೊಂದು ಒದಗಿಬಂದಿದೆ. ಸೆಪ್ಟೆಂಬರ್ 28 ಹಾಗೂ 29ರಂದು ಶಿವಣ್ಣ ಮುಖ್ಯಭೂಮಿಕೆಯಲ್ಲಿರುವ 'ಶಿವ' ಚಿತ್ರೀಕರಣ ಪರಪ್ಪನ ಅಗ್ರಹಾರದಲ್ಲಿ ನಡೆಯಲಿದೆ.
ಈಗಾಗಲೆ ಜೂನಿಯರ್ ಕಟ್ಟಾ ಸೆಲ್ಮೇಟ್ ಆಗಿರುವ ನಟ ದರ್ಶನ್ರನ್ನು ಶಿವಣ್ಣ ಭೇಟಿ ಮಾಡಲಿದ್ದಾರೆಯೇ? ಮಾತನಾಡಲಿದ್ದಾರೆಯೇ? ಏನಾಗುತ್ತದೋ ಏನೋ? ಎಂಬ ಪ್ರಶ್ನೆಗಳು ಉದ್ಭವಿಸಿವೆ. 'ಶಿವ' ಚಿತ್ರದ ಜೈಲು ಸನ್ನಿವೇಶದ ಚಿತ್ರೀಕರಣಕ್ಕಾಗಿ ಪರವಾನಗಿಯೂ ಸಿಕ್ಕಿದೆ. ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಲಿದ್ದಾರೆ.
ಪತ್ನಿ ಮೇಲೆ ದರ್ಶನ್ ಪ್ರತಾಪ ತೋರಿದ ಹಿನ್ನೆಲೆಯಲ್ಲಿ ಮೊದಲು ಆಕೆ ಭೇಟಿ ಮಾಡಿದ್ದೇ ಶಿವಣ್ಣನನ್ನು. ಬಳಿಕ ಶಿವಣ್ಣ ದಂಪತಿಗಳು ಇಬ್ಬರನ್ನೂ ಕರೆದು ಬುದ್ಧಿಹೇಳಿ ಕಳುಹಿಸಿದ್ದರು. ಆ ಬಳಿಕ ಶಿವಣ್ಣ ದಂಪತಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೈಯಲ್ಲಿ ಅವಾಜ್ ಹಾಕಿಸಿದ್ದ ಎಂಬ ಅಂಶಗಳು ಬೆಳಕಿಗೆ ಬಂದಿದ್ದವು.
ಆದರೆ ಈ ಬಗ್ಗೆ ಶಿವಣ್ಣ ಇದುವರೆಗೂ ಮೌನ ಮುರಿಯಲೇ ಇಲ್ಲ. ಅಷ್ಟೊತ್ತಿಗಾಗಲೆ ದರ್ಶನ್ ಪ್ರಕರಣ ನಾನಾ ಆಯಾಮಗಳನ್ನು ಪಡೆದಿತ್ತು. ಈಗ ದರ್ಶನ್ ಹಾಗೂ ಶಿವಣ್ಣ ನಡುವೆ ಮುಂಚೆ ಇದ್ದ ಗೆಳೆತಕ್ಕೂ ಹೊಡೆತ ಬಿದ್ದಿದೆ. ಶಿವಣ್ಣ ದರ್ಶನ್ರನ್ನು ಮಾತನಾಡುತ್ತಾರೋ ಇಲ್ಲ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಾರೋ? ಎಂಬ ಕುತೂಹಲ ಗಾಂಧಿನಗರದಲ್ಲಿ ನೆಲೆಗೊಂಡಿದೆ. (ದಟ್ಸ್ಕನ್ನಡಸಿನಿವಾರ್ತೆ)