ಕೆಂಪೇಗೌಡನಿಗೆ ವಿಘ್ನ ನಿವಾರಣೆ, ಮಾರ್ಚ್ 3ಕ್ಕೆ ತೆರೆಗೆ

By Rajendra

ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರಕ್ಕೆ ಎದುರಾಗಿದ್ದ ವಿಘ್ನವೊಂದು ಕಡೆಗೂ ನಿವಾರಣೆಯಾಗಿದೆ. ಬುಧವಾರ (ಫೆ.23) ಮಧ್ಯಾಹ್ನ ಕೆಂಪೇಗೌಡ ಬಿಡುಗಡೆಗೆ ತಡೆಯೊಡ್ಡಿ ಬೆಂಕಿ ಹೊತ್ತಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಜೆ ಹೊತ್ತಿಗೆ ಬೆಂಕಿಯನ್ನು ನಂದಿಸಿದೆ. ಒಟ್ಟಿನಲ್ಲಿ ಸುದೀಪ್ ಮತ್ತು ಬಸಂತಕುಮಾರ್ ಪಾಟೀಲ್ ನಡುವಿನ ನಾಟಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ.

ಸದ್ಯಕ್ಕೆ ಕೆಂಪೇಗೌಡನಿಗೆ ಸೆನ್ಸಾರ್ ಆಗುತ್ತಿದ್ದು ಫೆಬ್ರವರಿ 27 ಅಥವಾ 28 ರ ಹೊತ್ತಿಗೆ ಮೊದಲ ಪ್ರಿಂಟ್ ಹೊರಬೀಳಲಿದೆ. ಚಿತ್ರವನ್ನು ಮಾರ್ಚ್ 3ರಂದು ತೆರೆಗೆ ತರುತ್ತಿರುವುದಾಗಿ ಸುದೀಪ್ ತಿಳಿಸಿದ್ದಾರೆ. ಚಿತ್ರ ವಿತರಕರ ಕಡೆಯಿಂದಲೂ ಕೆಂಪೇಗೌಡನಿಗೆ ಭಾರಿ ಬೇಡಿಕೆ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.

ಕೆಂಪೇಗೌಡನಿಗೆ ಆರಂಭದಿಂದಲೂ ಹಲವಾರು ವಿಘ್ನಗಳು ಎದುರಾಗುತ್ತಲೇ ಇವೆ. ಈ ಹಿಂದೆ 'ಕೆಂಪೇಗೌಡ' ಚಿತ್ರೀಕರಣದ ವೇಳೆ ನಟ ಸುದೀಪ್ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೈಲೂರಿನಲ್ಲಿ ನಡೆದಿತ್ತು. ಚಿತ್ರದ ತಾರಾಗಣದಲ್ಲಿ ಅಂಚಲ್ ಸಬರವಾಲ್, ರವಿಶಂಕರ್ ಪಿ ಹಾಗೂ ಉದ್ಯಮಿ ಅಶೋಕ್ ಖೇಣಿ ಅಭಿನಯಿಸಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ಸಿಂಗಂ' ರೀಮೇಕ್ 'ಕೆಂಪೇಗೌಡ'.

More from Filmibeat

English summary
Sudeep lead film Kempe Gowda ready to hit the screen on 3rd March. Sudeep confirmed the first print will be ready by next Wednesday. Meanwhile the controversy between KFCC and Sudeep also ended on 23rd February evening. The movie has produced by Shankare Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X