Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಪೇಗೌಡನಿಗೆ ವಿಘ್ನ ನಿವಾರಣೆ, ಮಾರ್ಚ್ 3ಕ್ಕೆ ತೆರೆಗೆ
ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರಕ್ಕೆ ಎದುರಾಗಿದ್ದ ವಿಘ್ನವೊಂದು ಕಡೆಗೂ ನಿವಾರಣೆಯಾಗಿದೆ. ಬುಧವಾರ (ಫೆ.23) ಮಧ್ಯಾಹ್ನ ಕೆಂಪೇಗೌಡ ಬಿಡುಗಡೆಗೆ ತಡೆಯೊಡ್ಡಿ ಬೆಂಕಿ ಹೊತ್ತಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಜೆ ಹೊತ್ತಿಗೆ ಬೆಂಕಿಯನ್ನು ನಂದಿಸಿದೆ. ಒಟ್ಟಿನಲ್ಲಿ ಸುದೀಪ್ ಮತ್ತು ಬಸಂತಕುಮಾರ್ ಪಾಟೀಲ್ ನಡುವಿನ ನಾಟಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ.
ಸದ್ಯಕ್ಕೆ ಕೆಂಪೇಗೌಡನಿಗೆ ಸೆನ್ಸಾರ್ ಆಗುತ್ತಿದ್ದು ಫೆಬ್ರವರಿ 27 ಅಥವಾ 28 ರ ಹೊತ್ತಿಗೆ ಮೊದಲ ಪ್ರಿಂಟ್ ಹೊರಬೀಳಲಿದೆ. ಚಿತ್ರವನ್ನು ಮಾರ್ಚ್ 3ರಂದು ತೆರೆಗೆ ತರುತ್ತಿರುವುದಾಗಿ ಸುದೀಪ್ ತಿಳಿಸಿದ್ದಾರೆ. ಚಿತ್ರ ವಿತರಕರ ಕಡೆಯಿಂದಲೂ ಕೆಂಪೇಗೌಡನಿಗೆ ಭಾರಿ ಬೇಡಿಕೆ ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ.
ಕೆಂಪೇಗೌಡನಿಗೆ ಆರಂಭದಿಂದಲೂ ಹಲವಾರು ವಿಘ್ನಗಳು ಎದುರಾಗುತ್ತಲೇ ಇವೆ. ಈ ಹಿಂದೆ 'ಕೆಂಪೇಗೌಡ' ಚಿತ್ರೀಕರಣದ ವೇಳೆ ನಟ ಸುದೀಪ್ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೈಲೂರಿನಲ್ಲಿ ನಡೆದಿತ್ತು. ಚಿತ್ರದ ತಾರಾಗಣದಲ್ಲಿ ಅಂಚಲ್ ಸಬರವಾಲ್, ರವಿಶಂಕರ್ ಪಿ ಹಾಗೂ ಉದ್ಯಮಿ ಅಶೋಕ್ ಖೇಣಿ ಅಭಿನಯಿಸಿದ್ದಾರೆ. ತಮಿಳಿನ ಯಶಸ್ವಿ ಚಿತ್ರ 'ಸಿಂಗಂ' ರೀಮೇಕ್ 'ಕೆಂಪೇಗೌಡ'.