Don't Miss!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊರ್ಕಿಯಾಗಿ ದರ್ಶನ್,ಏಪ್ರಿಲ್ನಿಂದ ಚಿತ್ರೀಕರಣ
ನಾಯಕ ದರ್ಶನ್ ಬರಲಿಲ್ಲ. ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ಒಂದು ಫೋನ್ ಬಂದದ್ದೇ ಬೆಚ್ಚಿ, ಮನೆಗೆ ಹೊರಟುಹೋಗಿದ್ದರು. ಕಾರ್ಯಕಾರಿ ನಿರ್ಮಾಪಕ ಸಂತೋಷ್ ಪೈ ಹಾಗೂ ಫೈನಾನ್ಶಿಯರ್ ಕೆ.ರಮೇಶ್ ಬಾಬು ಅವರಷ್ಟೇ ಇದ್ದದ್ದು. ಸಂಪೂರ್ಣವಾಗಿ ಮಾತಾಡಿದ್ದು ಗಣೇಶ್.
ರಾತ್ರಿ ಹೊತ್ತು ಸುದ್ದಿಗೋಷ್ಠಿ ಕೂಡದು ಎಂದು ನಿರ್ಮಾಪಕರ ಸಂಘ ಹೊರಡಿಸಿದ್ದ ಫರ್ಮಾನು ಶುಕ್ರವಾರ(ಜ.23) ಸಂಪೂರ್ಣ ಉಲ್ಲಂಘನೆಯಾಗುವ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಯಿತು. ನಿರ್ಮಾಪಕರ ಸಂಘ ಈ ವಿಷಯದ ಕುರಿತು ಪಟ್ಟನ್ನು ಬಿಗಿಗೊಳಿಸಿದೆ ಅನ್ನೋದಕ್ಕೆ ಇದು ಉದಾಹರಣೆ. ಸುದ್ದಿಗೋಷ್ಠಿ ಮುಗಿಯುವ ಮುನ್ನವೇ ಶನಿವಾರ ರಾತ್ರಿ ನಡೆಯಬೇಕಿದ್ದ 'ಜೊತೆಗಾರ' ಚಿತ್ರದ ಪ್ರೆಸ್ ಮೀಟೂ ಭಾನುವಾರ ಸಂಜೆಗೆ ಮುಂದಕ್ಕೆ ಹೋದ ಸುದ್ದಿ ಹೊರಬಿತ್ತು. ನಿರ್ಮಾಪಕ ಅಶ್ವಿನಿ ರಾಮ್ಪ್ರಸಾದ್ ಕೂಡ ಸಂಘದ ಎಚ್ಚರಿಕೆಗೆ ಮಣಿದಿದ್ದಾರೆ ಅನ್ನೋದಕ್ಕೆ ಇದು ಕನ್ನಡಿ.
ತೆಲುಗಿನ 'ಪೋಕಿರಿ' ಚಿತ್ರದ ರೀಮೇಕ್ 'ಪೊರ್ಕಿ'. ಸಾಕಷ್ಟು ಸರ್ವೆ ಮಾಡಿದ ನಂತರ ದರ್ಶನ್ ಇದಕ್ಕೆ ಸೂಕ್ತ ಎಂದು ಗಣೇಶ್ ತೀರ್ಮಾನಿಸಿದ್ದು. ಚಿತ್ರಕ್ಕೆ ಖುದ್ದು ಗಣೇಶ್ ಸ್ಕ್ರಿಪ್ಟ್ ಸಿದ್ದಪಡಿಸಿದ್ದಾರೆ. ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲಿದೆ. ಏಪ್ರಿಲ್ನಿಂದ ಚಿತ್ರೀಕರಣ ಶುರು. ಯುಗಾದಿ ಹೊತ್ತಿಗೆ ಮುಹೂರ್ತ. ನಾಯಕಿ ಇನ್ನೂ ಗೊತ್ತಾಗಿಲ್ಲ. ಸಂಗೀತ ನಿರ್ದೇಶನ ಹರಿಕೃಷ್ಣ ವಹಿಸಿಕೊಂಡಿದ್ದಾರೆ. ಕೃಷ್ಣಕುಮಾರ್ ಕ್ಯಾಮೆರಾ ಹಿಡಿದು ನಿಲ್ಲಲಿದ್ದಾರೆ. ಎಂ.ಡಿ.ಶ್ರೀಧರ್ ನಿರ್ದೇಶಕನ ಕ್ಯಾಪ್ ತೊಡಲಿರುವ ಈ ಸಿನಿಮಾ ಕುರಿತು ತಂಡಕ್ಕೆ ಭಾರೀ ವಿಶ್ವಾಸವಿದೆ.
ನಿರ್ಮಾಪಕರ ಸಂಘ ಪಟ್ಟು ಸಡಿಲಿಸದೇ ಇದ್ದರೂ ಸುದ್ದಿಗೋಷ್ಠಿ ನಡೆಸುವ ಮೂಲಕ ಗಣೇಶ್ ಕಾಸರಗೋಡು ಸಾಂಕೇತಿಕ ಪ್ರತಿಭಟನೆ ನಡೆಸಿದಂತಾಯಿತು. ಪತ್ರಕರ್ತರಾದ ಸದಾಶಿವ ಶೆಣೈ ಹಾಗೂ ವಿಜಯ ಸಾರಥಿ ನಿರ್ಮಾಪಕರ ಸಂಘದ ಧೋರಣೆಯನ್ನು ಅನೌಪಚಾರಿಕ ಮಾತುಕತೆಯಲ್ಲಿ ಖಂಡಿಸಿದರು.
-
ಸಲ್ಮಾನ್ ಖಾನ್ಗೆ ಇನ್ನೂ ಮದುವೆಯಾಗಿಲ್ಲ, ಪ್ಲೀಸ್ ಕೊಲ್ಲಬೇಡಿ ಎಂದು ಕಣ್ಣೀರಿಟ್ಟ ರಾಖಿ ಸಾವಂತ್..!
-
ರೈಲಿನಲ್ಲಿ.. ವಿದೇಶದಲ್ಲಿ.. ಆಫ್ರಿಕಾದ ಕಾಡಿನಲ್ಲಿ ಮೊದಲು ಚಿತ್ರೀಕರಣ ಮಾಡಿದ್ದೇ ದ್ವಾರಕೀಶ್; ಕುಳ್ಳನ ಪ್ರಯೋಗಗಳೇನು?
-
ದ್ವಾರಕೀಶ್ ನಿಧನಕ್ಕೆ ಪಿಎಂ ಮೋದಿ ಸಂತಾಪ.. ಶಿವಣ್ಣ ಅಂತಿಮ ದರ್ಶನ; ಇಲ್ಲಿದೆ 'ಪ್ರಚಂಡ ಕುಳ್ಳ'ನ ಅಂತ್ಯಕ್ರಿಯೆ ಡಿಟೈಲ್ಸ್