ಉಪೇಂದ್ರ-ನಾಗಾರ್ಜುನ 'ಜುಗಲ್ ಬಂದಿ'ಯ ಸಿನಿಮಾ

ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರದು ಅಮರುಕ ಮಹಾರಾಜನ ಪಾತ್ರ. ಅನುಷ್ಕಾ ಶೆಟ್ಟಿಯದು ಪ್ರಮುಖವಾದ ಗೆಸ್ಟ್ ರೋಲ್. ಶ್ರೀ ರಾಮದಾಸು, ಶ್ರೀ ಮಂಜುನಾಥ್, ಪಾಂಡುರಂಗಡು ಹಾಗೂ ಅನ್ನಮಯ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಜೆಕೆ ಭಾರವಿ ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಭಾರವಿ ನಿರ್ದೇಶನಕ್ಕೂ ಇಳಿಯಲಿದ್ದಾರೆ.
ಆದಿ ಶಂಕರಾಚಾರ್ಯರು ತುಂಬಾ ಪ್ರಭಾವಶಾಲಿ ವ್ಯಕ್ತಿಯಾಗಿದ್ದವರು. ಅವರ ಚಿತ್ರ ಜನರನ್ನು ಖಂಡಿತ ಆಕರ್ಷಿಸಲಿದೆ. ಈಗಾಗಲೇ ಸೂಪರ್ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವವಿರುವ ಭಾರವಿ ನಿರ್ದೇಶನ ಹಾಗೂ ತೆಲುಗು, ಕನ್ನಡದ ಪ್ರತಿಭಾವಂತರ ಸಂಗಮವಾಗಿರುವ ಆದಿ ಶಂಕರಾಚಾರ್ಯ ಚಿತ್ರವನ್ನು ನೋಡಲು ಜನರು ಮುಗಿ ಬೀಳುವುದು ಗ್ಯಾರಂಟಿ. ಚಿತ್ರ ಸೆಟ್ಟೇರುವ ಸುದ್ದಿಯೇ ಸಂತೋಷ ಮೂಡಿಸಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada superstar Upendra and King Nagarjuna are teaming up for the first time. The actors are coming together for a forthcoming Telugu movie Adi Shankaracharya.


Click it and Unblock the Notifications











