Don't Miss!
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡ ವಾಹಿನಿಯಲ್ಲಿ ದೀಪಾವಳಿ ಧಮಾಕಾ
ಖ್ಯಾತ ನಟ ವಿಷ್ಣುವರ್ಧನ್ ಹಾಗೂ ನಟಿ ಸುಹಾಸಿನಿ ನಟಿಸಿರುವ, ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಕರ್ ನಿರ್ದೇಶನದ ಸೂಪರ್ ಹಿಟ್ ಚಿತ್ರ 'ಮಾತಾಡ್ ಮಾತಾಡ್ ಮಲ್ಲಿಗೆ' ಜೀಕನ್ನಡದಲ್ಲಿ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ 29 ಅಕ್ಟೋಬರ್ರಂದು ಬೆಳಿಗ್ಗೆ 12.30ಕ್ಕೆ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ಪ್ರಸಾರವಾಗಲಿದೆ.
ದೀಪಾವಳಿ ಪ್ರಯುಕ್ತ ಜೀ ಕನ್ನಡವು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದ್ದು ಭಾನುವಾರ 26ರಂದು ಸಂಜೆ 4.30ಕ್ಕೆ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ಹಾಗೂ ಖ್ಯಾತ ತಾರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಾಲಾ ನಟಿಸಿರುವ ರಾಷ್ಟ್ರ ಪ್ರಶಸ್ರಿ ವಿಜೇತ ಚಲನಚಿತ್ರ 'ತಾಯಿಸಾಹೇಬ' ಪ್ರಸಾರವಾಗುತ್ತಿದೆ. 27 ರಂದು ವಿಶೇಷ ಅನಿಮೇಟೆಡ್ ಸಿನೆಮಾ 'ಕೃಷ್ಣ' ಪ್ರಸಾರವಾಗಲಿದೆ.
ಇಷ್ಟೇ ಅಲ್ಲದೇ ಜೀ ಕನ್ನಡ ದೀಪಾವಳಿ ಹಬ್ಬದ ಪ್ರಯುಕ್ತ 25 ರಂದು ಸಂಜೆ 4.30ಕ್ಕೆ 'ಭೂಪತಿ', 27 ರಂದು ಬೆಳಿಗ್ಗೆ 10 ಗಂಟೆಗೆ 'ಸರಿಗಮಪ ನಡೆದು ಬಂದ ದಾರಿ' ವಿಶೇಷ ಕಾರ್ಯಕ್ರಮ. 12.30ಕ್ಕೆ ಚಲನಚಿತ್ರ 'ಸ್ನೇಹಾನಾ ಪ್ರೀತಿನಾ', ಮಧ್ಯಾಹ್ನ 2.30ಕ್ಕೆ ಅನಿಮೇಟೆಡ್ ಸಿನೆಮಾ 'ಕೃಷ್ಣ' ಹಾಗೂ 5.30ರಿಂದ 'ಹಾಗೆ ಸುಮ್ಮನೆ' ಧ್ವನಿಸುರುಳಿ ಬಿಡುಗಡೆ ಸಮಾರಂಭ ಪ್ರಸಾರವಾಗಲಿದೆ.
28ರಂದು ಮಂಗಳವಾರ ಮಧ್ಯಾಹ್ನ 3.30ರಿಂದ 'ಕುಣಿಯೋಣು ಬಾರಾ' ದೀಪಾವಳಿ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಹಾಗೂ 28ರಂದು ಸಂಜೆ 4.30ಕ್ಕೆ ಬ್ಲಾಕ್ ಬಸ್ಟರ್ ಕಾಮೆಡಿ ಸಿನೆಮಾ ಮಿ.ಗರಗಸ ಪ್ರಸಾರವಾಗಲಿದೆ.
ಜೀ ಕನ್ನಡ ತನ್ನ ವಿಶೇಷ ಕಾರ್ಯಕ್ರಮಗಳಿಗಾಗಿ ಜನಮನ್ನಣೆ ಗಳಿಸಿದ್ದು ದೀಪಾವಳಿ ನಂತರದಲ್ಲಿ ಪ್ರಕಾಶ್ ಬೆಳವಾಡಿ ನಿರ್ದೇಶನದ ಧಾರಾವಾಹಿ 'ಇಲ್ಲಿರುವುದು ಸುಮ್ಮನೆ' ನವೆಂಬರ್3ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ ಎಂದು ಜೀಕನ್ನಡ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ಕಿರುತೆರೆ)
ಇನ್ನೊಂದು
ಕನ್ನಡ
ಟಿವಿ
'ಸಮಯ'
ವಿಮರ್ಶೆ
:
ಮೂಗಿಗೇರಿದರೂ
ನೆತ್ತಿಗೇರದ
ಮಲ್ಲಿಗೆಯ
ಘಮಲು