Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ತಾರೆ... ಬಳ್ಳಾರಿಗೆ ಬರ್ತಾರೆ?
ಕರ್ನಾಟಕದ ಯಾವುದೇ ಕ್ಷೇತ್ರದಿಂದ ಪ್ರಿಯಾಂಕಾ ಸ್ಪರ್ಧಿಸಿದರೂ ಅವರ ವಿರುದ್ಧ ಕರಾವಳಿ ಹುಡುಗಿ ಐಶ್ವರ್ಯಳನ್ನು ಕಣಕ್ಕಿಳಿಸಲು ಪ್ರಯತ್ನಗಳು ಭರದಿಂದ ಸಾಗಿದೆ. ಅಕಸ್ಮಾತ್ ಆಕೆ ಒಪ್ಪದಿದ್ದಲ್ಲಿ ಕಳೆದ ಬಾರಿ ಸುಶ್ಮಾ ಸ್ವರಾಜ್ ಪರ ಇಲ್ಲಿ ತನ್ನ ಚರಿಶ್ಮಾ ಪ್ರಯೋಗಿಸಿದ ವಿಜಯಶಾಂತಿಯನ್ನು ಕರೆತಂದು ನಿಲ್ಲಿಸುವ ಸಾಧ್ಯತೆ ಇದೆ. ಸುಶ್ಮಾ ಸೋತರೂ ವಿಜಯಶಾಂತಿ ಕಳೆದ ಚುನಾವಣೆಯಿಂದಾಗಿ ಇಲ್ಲಿ ಜನಪ್ರಿಯ.
ಇನ್ನೊಂದು ಪ್ರಯತ್ನವೆಂದರೆ ಹಿಂದಿಯ ಹೇಮಮಾಲಿನಿಯನ್ನು ಅಖಾಡಕ್ಕೆ ಇಳಿಸುವ ಯತ್ನ. ಆಕೆ ಅಂದಕಾಲತ್ತಿಲ್ ಜನಗಳ ಮನಸೂರೆಗೊಂಡ ನೃತ್ಯಗಾತಿ. ಈಗಲೂ ಕನಸಿನಕನ್ಯೆಯಾಗಿಯೇ ಉಳಿದಿರುವ ಹೇಮಾಮಾಲಿನಿ ಬಳ್ಳಾರಿಗೆ ಬರುವರೇ?
ಆದರೆ ವಾಸ್ತವಾಂಶದಲ್ಲಿ ಇನ್ನೂ ಕಾಂಗೈ ಹೊರತು ಪಡಿಸಿ ಬೇರೆ ಪಕ್ಷಗಳ ಇರುವಿಕೆಯೆ ಗೊತ್ತಿಲ್ಲದ ಮುಗ್ದ ಜನರೇ ಹೆಚ್ಚು. ಇಂದಿರಾ ಗಾಂಧಿಯೇ ಚುನಾವಣೆ ಎದುರಿಸುತ್ತಿದ್ದಾರೆ ಎಂದೇ ನಂಬುತ್ತಿರುವ ಈ ಅನಕ್ಷರಸ್ಥ ಬಹುಮಂದಿಗೆ ಐಶ್, ಹೇಮಾ, ಶಾಂತಿ ಗೊತ್ತಾ ? ಆದರೆ ಸದ್ಯಕ್ಕಂತೂ ನಮ್ಮ 'ಸ್ಯಾಂಡಲ್ವುಡ್" ತಾರೆಯರ ಹೆಸರು ಡಮ್ಮಿಯಾಗಿಯೂ ಕೇಳಿಬರುತ್ತಿಲ್ಲ.