Don't Miss!
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರು ನಗರದಲ್ಲಿ ಕೇಬಲ್ ಆಪರೇಟರ್ಗಳ ಅನಿರ್ದಿಷ್ಟಾವಧಿ ಮುಷ್ಕರ
ಬೆಂಗಳೂರು : ಲಾರಿ ಮುಷ್ಕರ ನಿಂತಿತು ಎಂದು ಸಮಾಧಾನದ ನಿಟ್ಟುಸಿರು ಪಡುತ್ತಿರುವಂತೆಯೇ, ಇದೋ ಎರಗಿದೆ ಇನ್ನೊಂದು ಮುಷ್ಕರದ ಪ್ರಹಾರ !
ಕೇಬಲ್ ಪ್ರಸಾರದ ಮೇಲೆ ರಾಜ್ಯಸರ್ಕಾರ ಏಕಾಏಕಿ ಶೇ.150ರಷ್ಟು ಮನರಂಜನಾ ತೆರಿಗೆ ಹೆಚ್ಚಿಸಿರುವುದನ್ನು ಪ್ರತಿಭಟಿಸಿ ಕೇಬಲ್ ಆಪರೇಟರ್ಗಳು ಏಪ್ರಿಲ್ 24ರ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ. ಬೆಂಗಳೂರು ನಗರದಲ್ಲಿ ಕೇಬಲ್ ಪ್ರಸಾರ ನಿಂತಿದೆ.
ಮನರಂಜನಾ ತೆರಿಗೆಯನ್ನು 3 ಸಾವಿರ ರುಪಾಯಿಯಿಂದ 7.5 ಸಾವಿರ ರುಪಾಯಿಗೆ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಕೇಬಲ್ ಆಪರೇಟರ್ಗಳಿಗೆ ಹಾಗೂ ಗ್ರಾಹಕರಿಗೆ ಹೊರೆಯೆನಿಸಲಿದೆ. ಈ ಹೇರಿಕೆಯನ್ನು ಪ್ರತಿಭಟಿಸಿ ನಗರದ ಕೇಬಲ್ ಆಪರೇಟರ್ಗಳ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರದಿಂದ ಪ್ರಾರಂಭವಾಗಲಿದೆ. ಇದರಿಂದ ಬೆಂಗಳೂರು ನಾಗರಿಕರು ಕೇಬಲ್ ಟೀವಿ ಪ್ರಸಾರದಿಂದ ವಂಚಿತರಾಗಿದ್ದಾರೆ.
ತೆರಿಗೆ ಹೇರಿಕೆಯ ಬದಲು ಪ್ರತಿ ಗ್ರಾಹಕರಿಗೆ ಇಂತಿಷ್ಟು ದರವನ್ನು ಸರ್ಕಾರ ನಿಗದಿಪಡಿಸಬೇಕು ಎಂದು ಕೇಬಲ್ ಆಪರೇಟರ್ಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದಲ್ಲಿ 11 ಲಕ್ಷ ಕೇಬಲ್ ಸಂಪರ್ಕಗಳಿದ್ದು - 1800 ಆಪರೇಟರ್ಗಳು ಈ ಸಂಪರ್ಕಗಳನ್ನು ನಿಭಾಯಿಸತ್ತಿದ್ದಾರೆ. ಈ ಕೇಬಲ್ ಆಪರೇಟಿಂಗ್ ಕೇಂದ್ರಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು , ಮುಷ್ಕರದಿಂದಾಗಿ ಈ ಕಾರ್ಮಿಕರ ಜೀವನದ ಮೇಲೆ ಪೆಟ್ಟು ಬೀಳಲಿದೆ.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಮುಖಪುಟ
/
ಸ್ಯಾಂಡಲ್ವುಡ್