Don't Miss!
- News ರಾಜ್ಯದ ವಿವಿಧೆಡೆ ಮಳೆರಾಯನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ವಿವರ
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಹುಟ್ಟು ಹಬ್ಬ : ವಿಷಾದದ ನಡುವೆಯೂ ಸಂಭ್ರಮ
ಬೆಂಗಳೂರು : ವರನಟ ಡಾ.ರಾಜ್ಕುಮಾರ್ ತೀರಿಹೋಗಿ ಒಂದು ವರ್ಷವಾಗಿದೆ. ಈ ಬೇಸರದ ಮಧ್ಯೆಯೂ ಅವರ 79ನೇ ಹುಟ್ಟುಹಬ್ಬ ನಾಡಿನಾದ್ಯಂತ ಸಂಭ್ರಮದಿಂದ ನಡೆಯುತ್ತಿದೆ.
ರಾಜ್ ತೀರಿದನಂತರ ನಡೆಯುತ್ತಿರುವ ಮೊದಲ ಹುಟ್ಟುಹಬ್ಬವಿದು. ರಾಜ್ ನಮ್ಮೊಡನೆ ಶಾಶ್ವತವಾಗಿ ಇದ್ದಾರೆ ಎಂಬ ಭಾವನೆಯಲ್ಲೇ ರಾಜ್ಯಾದ್ಯಂತ ಹುಟ್ಟುಹಬ್ಬ ಸಡಗರದಿಂದ ನಡೆಯುತ್ತಿದೆ.
ರಾಜ್ಕುಮಾರ್ ಅಭಿನಯ ಮಾತ್ರದಿಂದ ಮನ್ನಣೆಗಳಿಸಿದ ವ್ಯಕ್ತಿಯಲ್ಲ. ಅವರು ಸರಳತೆ-ಸಭ್ಯತೆಯ ಪ್ರತಿರೂಪವಾಗಿದ್ದರು. ನಾಡು-ನುಡಿ ಬಗ್ಗೆ ಅಪಾರ ಅಭಿಮಾನವುಳ್ಳವರಾಗಿದ್ದರು. ಈ ಘನವಾದ ಸ್ವರೂಪದಿಂದಲೇ ರಾಜ್ ಕನ್ನಡ ಜನಮಾನಸದ ಆರಾಧ್ಯದೈವವಾಗಿ ಬೆಳೆದದ್ದು. ರಾಜ್ ದೈಹಿಕರೂಪದಲ್ಲಿ ಈಗ ನಮ್ಮೊಂದಿಗಿಲ್ಲ. ಆದರೆ ಅವರ ಚೈತನ್ನದ ಇರುವಿಕೆ ಕನ್ನಡ ಇರುವವರೆಗೆ ನಿರಂತರ...
ಅಲ್ಲಲ್ಲಿ ರಾಜ್ ಪ್ರತಿಮೆ-ಭಾವಚಿತ್ರಗಳಿಗೆ ಪೂಜೆ ನಡೆಯುತ್ತಿದೆ. ಫಲ-ಪುಷ್ಪಗಳನ್ನು ಅರ್ಪಿಸಲಾಗುತ್ತಿದೆ. ‘ಇದೋ ರಾಜ್ ಮುಂದೆ ಬಂದು ನಿಂತೇಬಿಟ್ಟರು...’ ಎನ್ನುವ ರೀತಿಯಲ್ಲಿ ಅವರ ಮಧುರ-ಮನೋಹರ ಕಂಠದ ಗೀತೆಗಳು ತೇಲಿಬರುತ್ತಿವೆ. ವಿವಿಧ ರಾಗರಸಗಳ ಗೀತೆಗಳು ಮತ್ತೆ ಮನಸೂರೆಗೊಳ್ಳುತ್ತಿವೆ. ‘ನಾದಮಯ ಈ ಲೋಕವೆಲ್ಲ...’ ಎಂಬ ಗೀತೆ ನಮ್ಮನ್ನು ಮತ್ತೆ ರಾಜ್ ನಾದಲೋಕಕ್ಕೆ ಸೆಳೆದುಕೊಳ್ಳುತ್ತದೆ...
(ದಟ್ಸ್ ಕನ್ನಡ ವಾರ್ತೆ)