Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕಾಲ ಮುಗಿದೇಹೋಯಿತು
'ಅಪ್ಪು ಈಗ ನಂಬರ್ ಒನ್. ಚೆನ್ನಾಗಿ ಹೋಗ್ತಿದೆ. ನಂಗೆ ಆನಂದ್ನಲ್ಲಿ ಸಿಕ್ಕ ಸ್ವಾಗತವೇ ಪುನೀತ್ಗೂ ಸಿಕ್ಕಿದೆ."
- ಶಿವಣ್ಣ ಖುಷಿಯಾಗಿದ್ದರು. ಅಪ್ಪು ಯಶಸ್ಸು ಅವರಿಗೆ ಖುಷಿ ತಂದಿತ್ತು . ಅಂದಹಾಗೆ, ಅದು ಅಪ್ಪು ಚಿತ್ರದ ಸಂತೋಷ ಕೂಟವಲ್ಲ ; ಕೋದಂಡರಾಮ ಚಿತ್ರದ ಸಂತೋಷ ಕೂಟ. ಸಿನಿಮಾ ನೂರು ದಿನ ಓಡದ ಹೊರತು ಅಣ್ಣಾವ್ರ ಕ್ಯಾಂಪು ಸಂತೋಷ ಕೂಟ ನಡೆಸುವುದಿಲ್ಲ .
ಮುಂದಿನ ಚಿತ್ರಗಳು, ಕೋದಂಡರಾಮ ಚಿತ್ರದ ಯಶಸ್ಸು , ಕೋದಂಡರಾಮ ಚಿತ್ರದಲ್ಲಿನ ತಮ್ಮ ಪಾತ್ರ ಮುಂತಾಗಿ ಶಿವಣ್ಣನವರ ಮಾತು ಹೊರಳಿತು. ಸ್ಮೈಲ್ ಚಿತ್ರ ತುಂಬಾ ಚೆನ್ನಾಗಿ ಬರುತ್ತಿದೆ. ಕಾರಂತರು ಕತೆಯ ಎಳೆ ಹೇಳಿದಾಗಲೇ ಆಕರ್ಷಕವಾಗಿತ್ತು . ಚಿತ್ರೀಕರಣ ಇನ್ನೂ ಚೆನ್ನಾಗಿ ಬರುತ್ತಿದೆ ಎಂದು ಶಿವಣ್ಣ ನಕ್ಕರು.
ಸ್ಮೈಲ್ ನಂತರ ತವರಿಗೆ ಬಾ ತಂಗಿ ಚಿತ್ರ. ಇದು ತುಂಬಾ ಸೆಂಟಿಮೆಂಟ್ ಸಿನಿಮಾ. ಮುತ್ತಣ್ಣ ನಂತರ ಇಂಥ ಪಾತ್ರವೇ ಸಿಕ್ಕಿರಲಿಲ್ಲ . ತಂಗಿ ನಂತರ ರಾಮಜನ್ಮ ಭೂಮಿ ಚಿತ್ರವಿದೆ. ಇದು ಆ್ಯಕ್ಷನ್ ಚಿತ್ರ ಎಂದರು ಶಿವಣ್ಣ . ಈ ನಡುವೆ ಶಿವಣ್ಣ , ಸುರೇಶ್ಗೌಡರ ಡಾನ್ ಎನ್ನುವ ಚಿತ್ರ ಒಪ್ಪಿಕೊಂಡಿರುವುದಾಗಿಯೂ, ಮೂವರು ಮಕ್ಕಳೊಂದಿಗೆ ಅಣ್ಣಾವ್ರು ನಟಿಸುವ ಚಿತ್ರವೊಂದನ್ನು ನಿರ್ದೇಶಿಸುವ ಕುರಿತಾಗಿಯೂ ಸುದ್ದಿಗಳು ಚಾಲ್ತಿಯಿವೆ. ಯಾವುದನ್ನೂ ಶಿವಣ್ಣ ದೃಢೀಕರಿಸಲಿಲ್ಲ .
ಅಂದಹಾಗೆ, ಶಿವಣ್ಣ ಈಗ ಸ್ಲಿಂ ಆಗಿದ್ದಾರೆ ! ನೋ ಕೊಬ್ಬು !