Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೌಡರಿರುವ ಮನೆಗೆ ದೀಪ ದೇವರ್ಯಾಕೆ...!!
- ಸಿನಿ ಡೆಸ್ಕ್, ದಟ್ಸ್ ಕನ್ನಡ ಬ್ಯೂರೋ
ಗುಡಿಯ ಮಾಡಿತಮ್ಮ... ನಮ್ಮ ಪುಟ್ಟ ಮನೆಯ ಗೌಡರಿರುವ ಮನೆಗೆ ದೀಪ ದೇವರ್ಯಾಕೆ
ದೇವರಿರುವ ಮನೆಗೆ ಬೀಗ ಬಾಗಿಲ್ಯಾಕೆ...!!
ಇದು ಅಂಬರೀಷ್ ಅಭಿನಯದ 200ನೇಚಿತ್ರದ ಪೀಠಿಕೆ. ಚಿತ್ರ ‘ಗೌಡ್ರು’. ಈ ಬಾರಿ ಅಂಬರೀಷ್ಗೆ ಕೇಂದ್ರ ಸಚಿವರಾಗುವ ಭಾಗ್ಯ ಸ್ವಲ್ಪದರಲ್ಲೇ ಕೈತಪ್ಪಿತು. ಆದರೇನು ಅವರ ವರ್ಚಸ್ಸು ಗಾಂಧಿನಗರದಲ್ಲಿ ಕುಂದಲಿಲ್ಲ. ಅವರು ಸಿನಿಮಾದಲ್ಲಿನ ತನ್ನ ಪ್ರಭಾವಲಯವನ್ನು ಉಳಿಸಿಕೊಂಡಿದ್ದಾರೆ. ‘ಗೌಡ್ರು’ ಇದಕ್ಕೆ ಸಾಕ್ಷಿ.
ನಿರ್ಮಾಪಕ ಸಂದೇಶ್ ನಾಗರಾಜ್ ಅವರ ‘ಸಂದೇಶ್ ಕಂಬೈನ್ಸ್ ’ಲಾಂಛನದಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಮಂಡ್ಯದ ಸಂಸದನ ಈ ಚಿತ್ರದ ಮರ್ಮ voice of the people. ಅತ್ತ ರಾಜಕೀಯದ ವರ್ಚಸ್ಸು ಇತ್ತ ಸಿನಿಮಾದ ತುಡಿತಕ್ಕೆ ಒಂದೇ ಉತ್ತರ ನೀಡುವ ಬಯಕೆ ಈ ಕಾಂಗ್ರೆಸಿಗನದು. ಇನ್ನೊಂದೆಡೆ ಒಕ್ಕಲಿಗ ನಾಯಕತ್ವ?.
ಸಿನಿಮಾ ನಿರ್ದೇಶನ ಎಸ್.ಮಹೇಂದರ್. ಅಂಬಿಗೆ ನಾಯಕಿಯರಾಗಿ ‘ತವರೂರ’ ನಟಿ ಶ್ರುತಿ ಮತ್ತು ‘ಸ್ವಾತಿಮುತಿ’ನ ಮೀನಾ ನಟಿಸಲಿದ್ದಾರೆ. ಚಿತ್ರಕ್ಕೆ ಸಂಗೀತ ಹಂಸಲೇಖ, ಛಾಯಾಗ್ರಹಣ ಸುಂದರ್ನಾಥ್ ಸುವರ್ಣ ಅವರದ್ದು.
ಈ ಕಾಂಗ್ರೆಸಿಗನ ‘ಗೌಡ್ರು’ ಮತ್ತು ಬಿಜೆಪಿ ಬ್ರಾಂಡ್ ವಿಜಯ ಶಾಂತಿಯ ‘ಗೌಡ್ತಿ ’ಚಿತ್ರಗಳು ಜೊತೆ-ಜೊತೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಜನ ಯಾವುದನ್ನು ಒಪ್ಪಿ ಅಪ್ಪಿ ಕೊಳ್ಳುತ್ತಾರೆಂದು ಕಾದು ನೋಡೋಣ. ಒಂದಂತು ನಿಜ, ಜನರಿಗೆ ಕಾಂಗ್ರೆಸ್ ‘ಗೌಡ್ರು’ ಅಥಾವ ಬಿಜೆಪಿ ‘ಗೌಡ್ತಿ ’ಬೇಡ. ಬೇಕಾಗಿರುವುದು ಮನಸ್ಸಿಗೆ ಕೊಂಚ ಮುದ ನೀಡುವ ಒಂದು ಅರ್ಥಪೂರ್ಣ ಸಿನಿಮಾ.
ಮುಖಪುಟ / ಸ್ಯಾಂಡಲ್ವುಡ್