Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡೇತರ ಚಿತ್ರಗಳಿಗೆ ಏಳು ವಾರ ತಡೆ
ಹಿರಿಯನಟ ರಾಜಾನಂದ್ ಸ್ಥಿತಿ ಗಂಭೀರ ಏರು-ತ್ತಿ-ರು-ವ ಆಸ್ಪ-ತ್ರೆ ಬಿಲ್ಲು , ನೆರ-ವಿ-ಗೆ ಕುಟುಂ-ಬ-ದ ಮೊರೆ.
ಬೆಂಗಳೂರು: ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾನಂದ್, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ಅವರನ್ನು ಮೈಸೂರಿನ ಬಾಲಗಂಗಾಧರನಾಥ ಸ್ವಾಮಿ ಅಪೊಲೋ ಅಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ.
ವೈವಿಧ್ಯಮಯ ಪಾತ್ರಗಳ ಮೂಲಕ ರಾಜಾನಂದ್ ಪ್ರೇಕ್ಷಕರನ್ನು ರಂಜಿಸಿದ್ದರು. ಸುಮಾರು 318 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕಾಲಿನ ಗ್ಯಾಂಗ್ರಿನ್ನಿಂದ ಬಳಲುತ್ತಿದ್ದ ರಾಜಾನಂದ್, ಇತ್ತೀಚೆಗೆ ಚೇತರಿಸಿಕೊಂಡಿದ್ದರು. ಆದರೆ ಮಧುಮೇಹ ಮತ್ತು ಕಿಡ್ನಿ ವೈಫಲ್ಯದ ಜೊತೆಗೆ -ಹೃದಯದ ತೊಂದರೆ ರಾಜಾನಂದ್ರನ್ನು ಕಾಡುತ್ತಿತ್ತು. ಅಪೊಲೋ ಅಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ರಾಜಾನಂದ್ ಹೋರಾಟ ನಡೆಸಿದ್ದಾರೆ.
ಸಂಕಷ್ಟ : ಸಿನಿಮಾ ನಂಬಿ ಬದುಕುತ್ತಿದ್ದ ರಾಜಾನಂದ್ ಕುಟುಂಬ ಪ್ರಸ್ತುತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಆಸ್ಪತ್ರೆ ವೆಚ್ಚ ಈಗಾಗಲೇ 50 ಸಾವಿರ ತಲುಪಿದೆ. ಮನೆಯಲ್ಲಿನ ಒಡವೆಗಳನ್ನು ಗಿರವಿಯಿಟ್ಟಿರುವ ರಾಜಾನಂದ್ರ ಪತ್ನಿ ವಿಮಲಮ್ಮ ಮುಂದಿನ ದಾರಿ ತಿಳಿಯದೆ ಕಂಗಲಾಗಿದ್ದಾರೆ. ಚಿತ್ರಗಳಲ್ಲಿ ಪೋಷಕ ಪಾತ್ರಕ್ಕೆ ಜೀವ ತುಂಬುತ್ತಿದ್ದ ರಾಜಾನಂದ್ರಿಗೆ ನೆ-ರ-ವು ನೀಡುವಂತೆ, ದಾನಿಗಳಲ್ಲಿ ಅವರ ಪತ್ನಿ ವಿಮಲಮ್ಮ -ಕೋ-ರಿ-ದ್ದಾ-ರೆ.(ಇ-ನ್ಫೋ ವಾರ್ತೆ)