ಗಿರೀಶ್ ಕಾಸರವಳ್ಳಿಯ ಹೊಸ ಚಿತ್ರ 'ಗುಲಾಬಿ ಟಾಕೀಸ್'
ಕುಂದಾಪುರ, ನ.24 : ಸದಭಿರುಚಿ ಮತ್ತು ಕಲಾತ್ಮಕ ಚಿತ್ರಗಳ ನಿರ್ಮಿಸುತ್ತಿರುವ ನಿರ್ಮಾಪಕ ಬಸಂತ ಕುಮಾರ್ ಪಾಟೀಲ್, ಹೊಸ ಚಿತ್ರ ಆರಂಭಿಸಿದ್ದಾರೆ. ಗಿರೀಶ್ ಕಾಸರವಳ್ಳಿ ಚಿತ್ರದ ನಿರ್ದೇಶಕರು. ಈ ಜೋಡಿಯ 'ನಾಯಿನೆರಳು' ಚಿತ್ರ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಸಂಗತಿ ಇಲ್ಲಿ ಸ್ಮರಣೀಯ.
ಈಗ ಆರಂಭಿಸಿರುವ ಚಿತ್ರದ ಹೆಸರು 'ಗುಲಾಬಿ ಟಾಕೀಸು'. ಕುಂದಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ವೈದೇಹಿ ಅವರ ಸಣ್ಣಕತೆ ಆಧಾರಿಸಿ ಕಾಸರವಳ್ಳಿ ಚಿತ್ರ ಮಾಡಲಾಗುತ್ತಿದೆ. ಉಮಾಶ್ರೀ ಮತ್ತು ಎಂ.ಡಿ.ಪಲ್ಲವಿ ಮುಖ್ಯಪಾತ್ರದಲ್ಲಿದ್ದಾರೆ. ನವೆಂಬರ್ ಕೊನೆ ವಾರದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications