twitter
    For Quick Alerts
    ALLOW NOTIFICATIONS  
    For Daily Alerts

    ‘ಲಂಚ ಸಾಮ್ರಾಜ್ಯ’ದಲ್ಲಿ ಮಾಜಿ ಲೋಕಾಯುಕ್ತ ವೆಂಕಟಾಚಲ!

    By Staff
    |

    ವಿಶ್ರಾಂತ ಲೋಕಾಯುಕ್ತ ಎನ್‌.ವೆಂಕಟಾಚಲ, ಭ್ರಷ್ಟಾಚಾರದ ವಿರುದ್ಧ ಮತ್ತೆ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ! ಆದರೆ ನಿಜ ಬದುಕಿನಲ್ಲಲ್ಲ ಬೆಳ್ಳಿತೆರೆಯ ಮೇಲೆ.

    ವೆಂಕಟಚಲ ಲೋಕಾಯುಕ್ತರಾಗಿ ಅಭಿನಯಿಸಿರುವ ‘ಲಂಚ ಸಾಮ್ರಾಜ್ಯ’ ಸಿನಿಮಾ ಸಿದ್ಧಗೊಂಡಿದ್ದು, ಡಿಸೆಂಬರ್‌ ಎರಡನೇ ವಾರ ಅಥವಾ ಮುಂದಿನ ಸಂಕ್ರಾಂತಿ ವೇಳೆಗೆ ಬಿಡುಗಡೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೆಂಕಟಾಚಲ, ಚಲನಚಿತ್ರ ನಿಜಕ್ಕೂ ಪರಿಣಾಮಕಾರಿ ಮಾಧ್ಯಮ. ಜನರಲ್ಲಿ ಅರಿವು ಮೂಡಿಸಲು ಮಾಧ್ಯಮವನ್ನು ಬಳಸಿಕೊಳ್ಳಬೇಕಾಗಿದೆ ಎಂದರು.

    ನನಗೆ ನಟನೆಯಲ್ಲಿ ಆಸಕ್ತಿಯಿಲ್ಲ. ಈ ಚಿತ್ರದ ವಸ್ತು ಇಷ್ಟವಾದದ್ದರಿಂದ, ನಟಿಸಿದೆ. ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರನ್ನು ಜಾಗೃತಗೊಳಿಸಲು ವಿಶ್ರಾಂತ ಬದುಕಿನ ದಿನಗಳನ್ನು ಬಳಸಿಕೊಳ್ಳುತ್ತೇನೆ. ಉಪನ್ಯಾಸ ಮತ್ತಿತರ ಚಟುವಟಿಕೆಗಳ ಮೂಲಕ ಪ್ರಯತ್ನ ಮುಂದುವರೆಯಲಿದೆ ಎಂದು ವೆಂಕಟಾಚಲ ಹೇಳಿದರು.

    ಚಿತ್ರದ ಬಗ್ಗೆ ಮಾಹಿತಿ ಒದಗಿಸಿರುವ ನಿರ್ದೇಶಕ ಬೂದಾಳ್‌ ಕೃಷ್ಣಮೂರ್ತಿ, ಆಸ್ಪತ್ರೆ ಸೇರಿದಂತೆ ವಿವಿಧೆಡೆ ವೆಂಕಟಾಚಲ ನಡೆಸಿದ ದಾಳಿಗಳನ್ನು, ಭ್ರಷ್ಟರ ವಿರುದ್ಧದ ಹೋರಾಟವನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಚಿತ್ರೀಕರಣ ನಡೆಸಿರುವುದು, ವೆಂಕಟಾಚಲ ಅಭಿನಯಿಸಿರುವುದು ಚಿತ್ರದ ಪ್ಲಸ್‌ ಪಾಯಿಂಟ್‌ ಎಂದು ಆಭಿಪ್ರಾಯಪಟ್ಟಿದ್ದಾರೆ.

    ಆರೋಗ್ಯ ಇಲಾಖೆ ಉದ್ಯೋಗಿ ತುಮಕೂರಿನ ಮಹದೇವಪ್ಪ ಚಿತ್ರದ ನಿರ್ಮಾಪಕರು.

    Tuesday, April 23, 2024, 20:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X