Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿವಿ ಹಿಡಿದು ಮಂಡ್ಯ ಜನರ ಕ್ಷಮೆ ಕೇಳಿದ ನಟ ದರ್ಶನ್
ನಟ ದರ್ಶನ್ ಅವರ ಸಾರಥಿ ಯಾತ್ರೆ ಮಂಗಳವಾರ (ಅ.25) ಸಕ್ಕರೆ ನಾಡು ಮಂಡ್ಯ ನಗರಕ್ಕೆ ಆಗಮಿಸಿತು. ಅವರ ಆಗಮನ ಮೊದಲೇ ತಿಳಿದಿದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರನ್ನು ಭರಮಾಡಿಕೊಳ್ಳಲು ಕಾತುರದಿಂದ ಕಾದಿದ್ದರು.
ತೆರೆದ ವಾಹನದಲ್ಲಿ ಬಂದ ಅವರು ಅಭಿಮಾನಿಗಳ ಕಡೆಗೆ ಕೈಬೀಸಿ ಶುಭಾಶಯ ಕೋರಿದರು. ಬಳಿಕ ಅವರು ನನ್ನಿಂದ ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ತಮ್ಮ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆದು ಕ್ಷಮೆಯಾಚಿಸಿದರು. ದರ್ಶನ್ ಕ್ಷಮೆಯಾಚಿಸಿದ್ದನ್ನು ವರುಣ ದೇವನಿಗೂ ಕರುಳು ಚುರುಕ್ ಎಂದಿತೋ ಏನೋ! ಧೋ ಎಂದು ಮಳೆ ಸುರಿಸುವ ಮೂಲಕ ಸ್ವಾಗತಿಸಿದ.
ಮಳೆಯ ನಡುವೆಯೇ ದರ್ಶನ್ ಸಾರಥಿ ಮೆರವಣಿಗೆ ನಡೆಯಿತು. ಮಂಡ್ಯ ಸರ್ಕಲ್ನಿಂದ ಸಾರಥಿ ಚಿತ್ರ ಪ್ರದರ್ಶನ ಕಾಣುತ್ತಿರುವ ಮಹಾವೀರ್ ಚಿತ್ರಮಂದಿರದ ತನಕ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಲವತ್ತಕ್ಕೂ ಹೆಚ್ಚು ನಿಮಿಷಗಳ ಕಾಲ ದರ್ಶನ್ ಮಂಡ್ಯದಲ್ಲಿ ಕಳೆದದ್ದು ವಿಶೇಷ. ಮಂಡ್ಯದ ಅಭಿಮಾನಿಗಳಿಗೆ ನಾನು ಚಿರಋಣಿಯಾಗಿದ್ದೇನೆ. ಇನ್ನು ಮುಂದೆ ಯಾವತ್ತೂ ಪತ್ನಿ ಮೇಲೆ ಕೈ ಮಾಡುವುದಿಲ್ಲ ಎಂದು ಅವರು ಅಭಿಮಾನಿಗಳ ಕ್ಷಮೆಯಾಚಿಸಿದರು. ಅಭಿಮಾನಿಗಳ ಭರ್ಜರಿ ಸ್ವಾಗತ ಹಾಗೂ ಮಳೆಯ ನಡುವೆ ಸಾರಥಿ ರೋಡ್ ಶೋ ಮುನ್ನಡೆಯಿತು. (ಒನ್ಇಂಡಿಯಾ ಕನ್ನಡ)