ಮೋದಿ ಬೆಂಬಲಿಸಿದ್ದಕ್ಕೆ ಸ್ಪರ್ಧೆಯಿಂದ ರಮ್ಯಾ ಔಟ್

ಕಾಂಗ್ರೆಸ್ ಯುವ ಅಧ್ಯಕ್ಷ ಪದವಿಗೆ ನಾಮಪತ್ರ ಸಲ್ಲಿಸಲು ಸೆ.25 ಕೊನೆ ದಿನಾಂಕವಾಗಿತ್ತು. ಅದರೆ, ರಮ್ಯಾ ಅವರು ಯುರೋಪ್ ನಲ್ಲಿ ಚಿತ್ರೀಕರಣದಲ್ಲಿದ್ದಾರೆ.
ರಮ್ಯಾ ಅವರ ದಿಢೀರ್ ಎಂಟ್ರಿ ಇಂದ ಕಂಗಾಲಾಗಿರುವ ಕೆಲ ಕಾಂಗ್ರೆಸ್ ನಾಯಕರು ಆಕೆಯನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
'ನನ್ನ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ, ಕೆಳಮಟ್ಟದಿಂದ ಬೆಳದು ಮೇಲಕ್ಕೆ ಬರುತ್ತೇನೆ' ಎಂದು ರಮ್ಯಾ ಹೇಳಿಕೊಂಡಿದ್ದಾರೆ.
ವಿಶ್ವನಾಥ್ ಕಿಡಿ: ರಮ್ಯಾ ಕಾಂಗ್ರೆಸ್ ಸ್ಪರ್ಧೆ ಬಗ್ಗೆ ಮಾಜಿ ಶಾಸಕ ವಿಶ್ವನಾಥ್ ಕೂಡಾ ಆಕ್ಷೇಪ ವ್ಯಕ್ತಪಡಿಸಿ, ರಮ್ಯಾ ಸೇರ್ಪಡೆಯಿಂದ ಕಾಂಗ್ರೆಸ್ ಏನು ಲಾಭ ಎಂಬುದನ್ನು ಅಂಕಲ್ ಡಿಕೆಶಿವಕುಮಾರ್ ಅವರೇ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದರು.
ಈಗಿನ್ನೂ ರಾಜಕೀಯ ರಂಗದ ಎಬಿಸಿಡಿ ಕಲಿಯುತ್ತಿರುವ ರಮ್ಯಾ ಅವರನ್ನು ಏಕ್ ದಂ ಯುವ ಕಾಂಗ್ರೆಸ್ ಪಟ್ಟಕ್ಕೆ ಕೂರಿಸಲು ಹೊರಟ ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಯುವ ನೇತಾರರು ಕಿಡಿಕಾರಿದ್ದರು, ವಿಷಯ ಹೈಕಮಾಂಡ್ ತನಕವೂ ಮುಟ್ಟಿತ್ತು.
ಪರಿಣಾಮ ಈಗ ಯುವ ಕಾಂಗ್ರೆಸ್, ಅಸೆಂಬ್ಲಿ, ಲೋಕಸಭೆ ಎಲ್ಲದರಿಂದಲೂ ರಮ್ಯಾ ಹಿಂದೆ ಸರಿಯುವಂತಾಗಿದೆ. ರಮ್ಯಾಗೆ ಈ ಬಗ್ಗೆ ಬೇಸರವಿದ್ದರೂ, ಎಲ್ಲವನ್ನೂ ಸಹಿಸಿಕೊಂಡು ಮೇಲಕ್ಕೆದು ಬರುವುದಾಗಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











