Don't Miss!
- Finance ಭಾರತದ ಮೊದಲ ಬುಲೆಟ್ ರೈಲಿನ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಸಿಸ್ಟಮ್ ಹಳಿ ಚಿತ್ರ ಬಹಿರಂಗ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸಿಟ್ಟು ಮನಸಾರೆ ಮಾಡಿದ್ದೀನಿ: ಯೋಗರಾಜ್ ಭಟ್
ಯೋಗರಾಜ್ ಭಟ್ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆಯ ಮೂಲಕ ಹೊಸತನದ ಸ್ಪರ್ಶ ನೀಡಿದವರು, ಇದಕ್ಕೂ ಮುನ್ನ "ಮಣಿ","ರಂಗಎಸ್ ಎಸ್ ಎಲ್ ಸಿ" ಯಂತಹ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿದರು ಅವರ ವೃತ್ತಿ ಬದುಕಿಗೆ ತಿರುವು ನೀಡಿದ್ದು ಮಾತ್ರ "ಮುಂಗಾರುಮಳೆ" ಚಿತ್ರ. ತದನಂತರ ನಿರ್ದೇಶಿಸಿದ "ಗಾಳೀಪಟ" ಸಹ ಯಶಸ್ಸು ಪಡೆಯಿತು. ಈಗ "ಮನಸಾರೆ" ಎಂಬ ನೂತನ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರಕಥೆ-ಸಂಭಾಷಣೆ-ಗೀತಸಾಹಿತ್ಯ ನಿರ್ದೇಶನ ಎಲ್ಲವನ್ನೂ ನಿಬಾಯಿಸಿರುವ ಭಟ್ಟರು ಮನಸಾರೆಯನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರಂತೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
1.ಒಂದೂವರೆ
ವರ್ಷದ
ಗ್ಯಾಪ್
ನಲ್ಲಿ
ಸಿನಿಮಾ
ಮಾಡ್ತಾ
ಇದೀರಿ,
ಈ
ಮಧ್ಯೆ
ಲಗೋರಿ
ಪ್ರಾಜೆಕ್ಟ್
ರದ್ದಾಯಿತು..
ಹೌದು
ನಿರ್ದೇಶಕನಾದ
ನನಗೆ
ಅಂತಹದ್ದೊಂದು
ಗ್ಯಾಪ್
ಬೇಕಾಗುತ್ತೆ,
ಎಲ್ಲ
ಹಂತದಲ್ಲೂ
ಎಚ್ಚರವಹಿಸಿ
ಕೆಲಸ
ಮಾಡಬೇಕಲ್ವಾ?
2.ಮನಸಾರೆ
ಚಿತ್ರ
ಹೇಗಿದೆ
?
ಅದರ
ಥೀಮ್
ಏನು?
ಮನಸಾರೆ
ಪ್ರೆಶ್
ಆಗಿದೆ,
ನಾನಂದು
ಕೊಂಡಂತೆ
ಚಿತ್ರಕ್ಕೆ
ಎಲ್ಲವೂ
ಕೂಡಿ
ಬಂದಿದೆ.
ನನ್ನ
ಇತರೆ
ಚಿತ್ರಗಳಿಗಿಂತ
ಭಿನ್ನವಾಗಿದೆ.
ಯಂಗ್
ಫೀಲ್
ಇದೆ,
ಸಂಭಾಷಣೆ
ಗಮನ
ಸೆಳೆಯುವಂತಿದೆ.
ಚಿತ್ರಕ್ಕೆ
ಪೂರಕವಾದ
ಪರಿಸರದಲ್ಲೂ
ಹೊಸತನವಿದೆ.
ಥೀಮ್
ಚಿತ್ರ
ನೋಡಿ
ತಿಳ್ಕೊಳ್ಳಿ.
3.ಮನಸಾರೆ
ಪ್ರೇಮ
ಕಥೇನಾ?
ಹೌದು
ಪ್ರೇಮ
ಕಥೇನೇ..
ಈ
ಚಿತ್ರ
ಪ್ರೇಕ್ಷಕರನ್ನು
ವಿಪರೀತ
ನಗಿಸುತ್ತೆ
ಮತ್ತೆ
ವಿಪರೀತ
ಅಳಿಸುತ್ತೆ.
ಆದರೆ
ಕಥೆ
ಬಗ್ಗೆ
ಹೇಳಲ್ಲ,
ಸಿನಿಮಾ
ನೋಡಿ.
4.ನಿಮ್ಮ
ಹಿಂದಿನ
ಚಿತ್ರಗಳಲ್ಲಿ
ಗಣೇಶ್
ಇದ್ರು
ಇಲ್ಲಿ
ದಿಗಂತ್
ಇದ್ದಾರಲ್ಲ?
ಮನಸಾರೆ
ಚಿತ್ರದ
ಪಾತ್ರಕ್ಕೆ
ದಿಗಂತ್
ಸೂಟಬಲ್
ಬಾಯ್
ಅನಿಸ್ತು.
ಇದು
ಗಣೇಶ್
ಗೆ
ಹೊಂದುವಂತಹ
ಪಾತ್ರವಲ್ಲ,
ನನ್ನ
ಎರಡು
ಸಿನಿಮಾಗಳಲ್ಲಿ
ದಿಗಂತ್
ನಟಿಸಿದ್ದ,
ಇಲ್ಲಿ
ಪೂರ್ಣ
ಪ್ರಮಾಣದ
ನಾಯಕನಾಗಿ
ನಟಿಸಿದ್ದಾನೆ
ಪಾತ್ರ
ನಿರ್ವಹಣೆ
ಚೆನ್ನಾಗಿ
ಮಾಡಿದ್ದಾನೆ.
5.ಚಿತ್ರದ
ಪರಿಸರದ
ಬಗ್ಗೆ
ಹೇಳಿ
ಉತ್ತರ
ಕರ್ನಾಟಕದ
ಬಯಲು
ಸೀಮೆ,
ಗಂಗಾವತಿ,
ಸಂಡೂರು
ಗಳಲ್ಲಿ
ಹಾಡಿನ
ಚಿತ್ರೀಕರಣವಾಗಿದೆ.
ಉಳಿದ
ಮಾತಿನ
ಭಾಗವನ್ನು
ಮೈಸೂರು,
ಮಡಿಕೇರಿ,
ಮಂಡ್ಯ,
ಕಾರಾವಾರ
ಮತ್ತು
ಬೆಂಗಳೂರಿನ
ಸ್ಟುಡಿಯೋಗಳಲ್ಲಿ
ಮಾಡಿದ್ದೇನೆ
ಎಲ್ಲವೂ
ಚೆನ್ನಾಗಿ
ಒಡಮೂಡಿದೆ,
ಪ್ರೇಕ್ಷಕರಿಗೂ
ಇಷ್ಟವಾಗಬಹುದು.
6.ಮನಸಾರೆಯಲ್ಲಿ
ಏನೋ
ನಿಮ್ಮ
ಹೊಸಕಲ್ಪನೆಗಳು
ಇವೆ
ಎಂಬ
ಸುದ್ದಿ
ಇತ್ತು.
ನನ್ನ
ಹುಟ್ಟೂರು
ಹಾನಗಲ್,
ಅಲ್ಲಿನ
ಪರಿಸರದಲ್ಲಿ
ನಾನು
ಕಂಡ
ಕನಸು
ಅಂದುಕೊಂಡ
ಸಾಧ್ಯತೆಗಳನ್ನು
ಈ
ಚಿತ್ರದಲ್ಲಿ
ಸಾಕಾರ
ಮಾಡಿಕೊಂಡಿದ್ದೇನೆ.
ಈ
ಪೈಕಿ
ನಾನು
ಪದವಿ
ವಿದ್ಯಾರ್ಥಿಯಾಗಿದ್ದಾಗ
ಮಾಡಿದ್ದ
ಒಂದು
ಪ್ರಾಜೆಕ್ಟ್
ಅನ್ನು
ಇಲ್ಲಿ
ಸಾಕ್ಷಿಕರಿಸಿದ್ದೇನೆ,
ಹೆಚ್ಚು
ವಾಹನಗಳು
ಓಡಾಡುವ
ರಸ್ತೆಯಲ್ಲಿ
ಡುಬ್ಬು
ನಿರ್ಮಿಸಿ
ಅಲ್ಲಿ
ಬೀಳುವ
ಒತ್ತಡದಿಂದ
ವಿದ್ಯುತ್
ಚ್ಚಕ್ತಿ
ನಿರ್ಮಿಸಬಹುದೆಂಬ
ಕಲ್ಪನೆಯಿತ್ತು.
ಅದು
ಈಗ
ವಾಸ್ತವದಲ್ಲೂ
ಸಾಧ್ಯವಿದೆ
ಅದರ
ಒಂದು
ತುಣುಕನ್ನು
ಮನಸಾರೆ
ಹಾಡಿನ
ಸನ್ನಿವೇಶದಲ್ಲಿ
ಬಳಸಿದ್ದೇನೆ.
ಮತ್ತೆ
specific
ಆಗಿ
ಚಿತ್ರದಲ್ಲಿ
ಬರುವ
ತಿರುವುಗಳು
shocking
ಆಗಿವೆ,
ಮನಸ್ಸನ್ನು
ಆವರಿಸುವಂತಹ
ಎಷ್ಟೋ
ಸಂಗತಿಗಳಿವೆ.
7.ಸಂಗೀತ
ಮತ್ತು
ಸಾಹಿತ್ಯದಲ್ಲಿ
ಹೊಸತೇನಿದೆ?
ಮನಸಾರೆಯಲ್ಲಿ
ಸರಳ
ಸಾಹಿತ್ಯ
ಮತ್ತು
ಸಂಗೀತವಿದೆ,
ಇಲ್ಲಿ
ಸಂಪೂರ್ಣ
ತಾಕತ್ತು
ಬಳಕೆಯಾಗಿದೆ.
ಸಿಂಪಲ್
ಮೆಲೋಡಿಯಿದೆ.
ಮೊದಲು
ನನಗೆ
ತುಂಬಾ
ಹೆದರಿಕೆಯಾಗಿತ್ತು,
ಆದರೆ
ಧ್ವನಿ
ಸುರುಳಿ
ಬಿಡುಗಡೆಯಾಗಿ
ಮಾರ್ಕೆಟ್
ಹಿಟ್
ಆಗಿದೆ.
ಜನ
ಹಾಡುಗಳನ್ನು
ಸಂಗೀತವನ್ನು
ಇಷ್ಟ
ಪಟ್ಟಿದ್ದಾರೆ,
ಜಯಂತ್
ಕಾಯ್ಕಿಣಿ
ಸಾಹಿತ್ಯ
ಮನೋಮೂರ್ತಿ
ಸಂಗೀತ
ಫೈನ್.
ಎಲ್ಲೋ
ಮಳೆಯಾಗಿದೆ.....
ಎಂಬ
ಟ್ರಾಕ್
ತುಂಬಾ
ಇಷ್ಟ.
8.ಚಿತ್ರೀಕರಣ
ಸಂಧರ್ಭ
ಹಾಗೂ
ಚಿತ್ರದ
ನಾಯಕಿ
ಬಗ್ಗೆ
ಹೇಳಿ?
ನಾಯಕಿ
ಅಂದ್ರಿತಾ
ರೇ
ನನ್ನ
ನಿರೀಕ್ಷೆಗೂ
ಮೀರಿ
ಅಭಿನಯ
ಮಾಡಿದ್ದಾಳೆ.
ಆ
ಹುಡುಗಿ
ಅಭಿನಯದಲ್ಲಿ
ತುಂಬಾ
Involvement
ತಗೊಂಡಿದ್ದಾಳೆ.
ರೋಮ್ಯಾಂಟಿಕ್
ಸೀನ್
ನಲ್ಲಂತೂ
ಸೂಪರ್,
ಒಳ್ಳೆ
Glamorous
ಗೊಂಬೆ
ಅವಳು.
ಅವಳ
ಅಭಿನಯವನ್ನ
ನೋಡೀನೇ
ಆನಂದಿಸಬೇಕು.
ದಿಗಂತ್
ಕೂಡ
ವಿಶಿಷ್ಠವಾಗಿ
ಅಭಿನಯಿಸಿದ್ದಾನೆ.
ಅಂದ್ರಿತಾ
ಹಾಗೂ
ದಿಗಂತ್
ಕೆಮಿಸ್ಟ್ರಿ
ಚೆನ್ನಾಗಿ
workout
ಆಗಿದೆ.
ಎಲ್ಲರೂ
ಶ್ರಮವಹಿಸಿ
ಚಿತ್ರ
ಮಾಡಿದ್ದೇವೆ,
ಚಿತ್ರೀಕರಣ
ಸಂಧರ್ಭ
ದಲ್ಲೂ
Normal
ಆಗಿದ್ದೆವು.
ಕ್ರಿಕೆಟ್
ಆಡಿಕೊಂಡು,
ತಮಾಷೆಯಾಗಿ
ಕೆಲಸ
ಮಾಡಿದ್ವಿ.
ನಿರ್ಮಾಪಕರು
ನಮಗೆ
ಒತ್ತಾಸೆಯಾಗಿ
ಇದ್ರು.
9.ಮನಸಾರೆ
ಸಂದೇಶ
ನೀಡುವ
ಚಿತ್ರಾನಾ?
ಅಥವಾ
ಬರೀ
ಎಂಟರ್
ಟೈನ್
ಮೆಂಟಾ?
ಹೌದು,
ಮನಸಾರೆ
ಸಂದೇಶ
ನೀಡುವ
ಚಿತ್ರ.
ತುಂಬಾ
ಪವರ್
ಫುಲ್
ಆಗಿದೆ...
ಚಿತ್ರ
ನೋಡಿ.
ಮನಸಾರೆ
ಚಿತ್ರವನ್ನು
ಮನಸಿಟ್ಟು
ಮಾಡಿದ್ದೇನೆ,
ಸಹೃದಯ
ಪ್ರೇಕ್ಷಕರಿಗೆ
ಅರ್ಪಿಸುತ್ತಿದ್ದೇನೆ.
ಇದು
ಮೂರುವರೆ
ಕೋಟಿ
ಬಜೆಟ್
ನಲ್ಲಿ
ತಯಾರಾದ
ಸಿನಿಮಾ,
ಪ್ರೇಕ್ಷಕರಿಗೆ
ಖಂಡಿತಾ
ಇಷ್ಟವಾಗುತ್ತೆ.
10.ಚಿತ್ರದ
promotion
campaign
ಏನಾದ್ರೂ..
ಹಾಗೇನಿಲ್ಲ,
ಸಹಜವಾಗಿ
ಕೆಲವು
ಟಿವಿ
ಮಾಧ್ಯಮಗಳಲ್ಲಿ
ಸಂದರ್ಶನ
ಇರುತ್ತೆ.
ಆದರೆ
ಚಿತ್ರ
ಓಡಬೇಕು
ಎಲ್ಲರಿಗು
ಇಷ್ಟವಾಗಬೇಕು...
ಆಮೇಲೆ
ಅವೆಲ್ಲಾ....
11.ಮುಂದಿನ
ಚಿತ್ರ
ಯಾವಾಗ?
ಪುನೀತ್
ನಿಮ್ಮ
ಚಿತ್ರದಲ್ಲಿ
ನಟಿಸುತ್ತಾರೆ
ಎಂಬ
ರೂಮರ್
ಇದೆಯಲ್ಲ?
ಹೌದು,
ಮನಸಾರೆ
ಬಿಡುಗಡೆಯಾದ
ಮೇಲೆ
ಮುಂದಿನ
ಚಿತ್ರದ
ಸಿದ್ದತೆ
ಆಗಲಿದೆ.
ಪುನೀತ್
ನನ್ನ
ಹೊಸಚಿತ್ರದ
ನಾಯಕ
ನಾಯಕರಾಗ್ತಾರೆ.
ಮುಂದಿನ
ವರ್ಷದ
ಮೇ-ಜೂನ್
ತಿಂಗಳಲ್ಲಿ
ಚಿತ್ರ
ಸೆಟ್ಟೇರಲಿದೆ.
ಕಡೆಯ
ಬಾರಿ
ಕೇಳ್ಕೋಳೋದು
ಇಷ್ಟೆ,
ಮನಸಾರೆ
Good
Feel
ಇರುವ,
Fresh
Young
Team
ಇರೋ
ವಿಭಿನ್ನ
ಅಭಿರುಚಿಯ
ಸಿನಿಮಾ,
ನೋಡಿ
ಆನಂದಿಸಿ
ಎಂದು
ಮಾತು
ಮುಗಿಸಿದರು
ಯೋಗರಾಜ್
ಭಟ್.