twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ಕಲಾವಿದೆ ರೇಣುಕಮ್ಮ ಮುರಗೊಡ ಇನ್ನಿಲ್ಲ

    By Staff
    |

    ಸವದತ್ತಿ, ಜೂ.25: ಹಿರಿಯ ಪೋಷಕ ನಟಿ, ರಂಗಭೂಮಿ ಕಲಾವಿದೆ ರೇಣುಕಮ್ಮ ಮುರಗೊಡ ಅವರು ಮುರಗೋಡಿನ ತಮ್ಮ ಸ್ವಗೃಹದಲ್ಲಿ ಬುಧವಾರ ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಅನ್ನಾಹಾರ ತ್ಯಜಿಸಿದ್ದರು, ಮಾತು ಸಹ ನಿಂತು ಹೋಗಿತ್ತು.

    ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಇವರು ಕಳೆದ ಕೆಲತಿಂಗಳಿನಿಂದ ಅಸ್ವಸ್ಥರಾಗಿ, ಬೈಲಹೊಂಗಲ ಸಮೀಪದ ಮುರಗೋಡಿನ ಮನೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು ಹಿರಿ ಜೀವ. ಆಸ್ಪತ್ರೆಯ ವೈದ್ಯಕೀಯ ವೆಚ್ಚಭರಿಸಲಾಗದೆ ಮನೆಯಲ್ಲೇ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

    ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಕಲಾವಿದೆ ರೇಣುಕಮ್ಮ ಅವರ ಚಿಕಿತ್ಸೆ ನೆರವಿಗೆ ಯಾರು ಬಂದಿರಲಿಲ್ಲ. ಸ್ಥಳೀಯ ಕಲಾಭಿಮಾನಿಗಳು ಸರ್ಕಾರ ಹಾಗೂ ಅಧಿಕಾರಿ ವರ್ಗದ ವಿರುದ್ಧ ಅವರ ಮನೆಯವರು ಕಿಡಿಕಾರಿದ್ದರು. ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೆಸರು ಗಳಿಸಿದ ರೇಣುಕಮ್ಮ ಅವರು ಚಂದ್ರಮುಖಿ ಪ್ರಾಣಸಖಿ, ಕ್ರೌರ್ಯ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲೂ ಮೂಡಲಮನೆ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

    (ದಟ್ಸ್‌ಕನ್ನಡ ಸಿನಿವಾರ್ತೆ)

    ಮೂಡಲ ಮನೆ ಅಜ್ಜಿಗೆ ನೆರವು ನೀಡಲು ಸಂಪರ್ಕಿಸಿ
    ಕೋಮಾಸ್ಥಿತಿ ತಲುಪಿದ ಮೂಡಲ ಮನೆ ಅಜ್ಜಿ

    Thursday, April 25, 2024, 1:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X