Don't Miss!
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾನವೀಯತೆ ಮೆರೆದ ಕಲಾಸಾಮ್ರಾಟ್ ನಾರಾಯಣ್
ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅಂಧ ಮಕ್ಕಳ ಬಗ್ಗೆ ಕಾಳಜಿ ತೋರಿಸಿದ್ದಾರೆ. ತಮ್ಮ ಪುತ್ರ ಪಂಕಜ್ ಅಭಿನಯದ 'ರಣ' ಚಿತ್ರದ ಹಾಡುಗಳನ್ನು ಜೆ.ಪಿ.ನಗರದಲ್ಲಿರುವ ರಮಣ ಮಹರ್ಷಿ ಅಂಧ ಮಕ್ಕಳ ಶಾಲೆಯಲ್ಲಿ ಬಿಡುಗಡೆ ಮಾಡಿದ ಅವರು ಅಂಧ ಮಕ್ಕಳು ಒಳಗಣ್ಣಿನಿಂದ ದೇವರನ್ನು ನೋಡುತ್ತಾರೆ.
ನಮ್ಮ ಅನುಕಂಪಕ್ಕಿಂತ ಹೆಚ್ಚಾಗಿ ಪ್ರೋತ್ಸಾಹದ ಅವಶ್ಯಕತೆ ಈ ಮಕ್ಕಳಿಗೆ ಬೇಕಾಗಿದೆ. ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಒಂದು ದಿನ ಶೂಟಿಂಗ್ ನಿಂತರೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ನಾನು ಒಂದು ದಿನದ ಚಿತ್ರೀಕರಣ ವೆಚ್ಚವನ್ನು ಶಾಲೆಗಾಗಿ ನೀಡುತ್ತೇನೆ ಎಂದರು.
ಪಂಕಜ್ ಹುಟ್ಟುಹಬ್ಬವನ್ನು ಮುಂದೆ ನಾವು ಅಂಧ ಮಕ್ಕಳ ಶಾಲೆಯಲ್ಲಿಯೇ ಆಚರಿಸುತ್ತೇವೆ. ಶಾಲೆಗಾಗಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಪಂಚತಾರಾ ಹೋಟೆಲ್ಗಳಲ್ಲಿ ಆಡಿಯೊ ಬಿಡುಗಡೆ ಮಾಡುವುದಕ್ಕಿಂತ ಇದೊಂದು ಅರ್ಥಪೂರ್ಣ ಸಮಾರಂಭ ಎಂದರು. ಇಂತಹ ಮಾನವೀಯತೆಯ ಗುಣ ಉಳಿದ ಕಲಾವಿದರಿಗೂ ಬರಲಿ ಮತ್ತು ಅಂಧ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ಸಿಗುವಂತಾಗಲಿ. (ಒನ್ಇಂಡಿಯಾ ಕನ್ನಡ)