ಸುದೀಪ್ ಎಲ್ಲಿದ್ದಾರೆ ಹೇಗಿದ್ದಾರೆ ಏನು ಮಾಡುತ್ತಿದ್ದಾರೆ?
ಸುದೀಪ್ ಎಲ್ಲಿದ್ದಾರೆ? ಹೀಗೊಂದು ಪ್ರಶ್ನೆ ಸಿನಿಪ್ರಿಯರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಈ ನಡುವೆ ಸುದೀಪ್ ಎಲ್ಲಿಯೂ ಕಾಣಿಸುತ್ತಿಲ್ಲ. "ಕೆಂಪೇಗೌಡ" ಚಿತ್ರ ಯಶಸ್ವಿಯಾಗಿ ಮೊದಲು ಕೋಟಿಗಟ್ಟಲೇ ಕಳೆದುಕೊಂಡಿದ್ದ ನಿರ್ಮಾಪಕ ಶಂಕರೇಗೌಡ, ತಿರುಗಿ ಗಳಿಸಿದ್ದಾರೆ. ಆದರೆ ಕೆಂಪೇಗೌಡ ಗೆಲುವಿನ ರೂವಾರಿ ಸುದೀಪ್ ಈಗೆಲ್ಲಿ?
ತಿಂಗಳುಗಳ ಹಿಂದೆ ವಿಷ್ಣುವರ್ಧನ ಚಿತ್ರದ ಹಾಡಿನ ಚಿತ್ರೀಕರಣ, ತೆಲುಗು ಚಿತ್ರದ ಚಿತ್ರೀಕರಣ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯ ಹೀಗೆ ಬ್ಯುಸಿಯಾಗಿದ್ದ ಸುದೀಪ್ ಈಗ ಎಲ್ಲಿಯೂ ಕಾಣಸಿಗುವುದಿಲ್ಲ. ಬೇರೆ ಭಾಷೆಗಳಲ್ಲಿ ಹೊಸ ಚಿತ್ರಗಳನ್ನು ಒಪ್ಪಿಕೊಂಡ ಸುದ್ದಿಯೂ ಇಲ್ಲ. ಶಶಾಂಕ ನಿರ್ದೇಶನದಲ್ಲಿ ಸುದೀಪ್ ನಟಿಸಬೇಕಾಗಿರುವ ಚಿತ್ರವೂ ಸದ್ದು ಮಾಡುತ್ತಿಲ್ಲ.
"ಒಂದು ಹಂತದ ನಂತರ ನನಗೆ ಚಿತ್ರರಂಗ ಸಾಕು" ಎಂದು ಹಿಂದೊಮ್ಮೆ ಹೇಳಿದ್ದ ಸುದೀಪ್ ಅದನ್ನೇ ನಿಜ ಮಾಡುತ್ತಿದ್ದಾರೆಯೇ? ಸಿಸಿಎಲ್ ನಲ್ಲಿ ಸೋತಾಗ ಬಂದ ತೀಕ್ಷ್ಣ ಪ್ರತಿಕ್ರಿಯೆಯಿಂದ ಅವರಿಗೆ ನೋವಾಗಿದೆಯೇ? ಅಥವಾ ಸದ್ದಿಲ್ಲದೇ ಚಿತ್ರ ನಿರ್ಮಾಣಕ್ಕೆ ತಯಾರಿ ನಡೆಸಿದ್ದಾರೆಯೇ? ಉತ್ತರ ಯಾರಿಗೂ ಗೊತ್ತಾಗುತ್ತಿಲ್ಲ. ಸುದೀಪ್ ಬಾಯಿ ಬಿಡುತ್ತಿಲ್ಲ.


Click it and Unblock the Notifications











