Don't Miss!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- News Karnataka Lok Sabha Elections: ರಾಷ್ಟ್ರೀಯ ಮುಖಂಡರು VS ರಾಜ್ಯ ನಾಯಕರು; ಗೆಲ್ಲೋದು ಯಾರು?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಜ್ವಲ್ ಜೊತೆ ಆಂದ್ರಿತಾ ಮೆರವಣಿಗೆಗೆ ಸಿದ್ಧತೆ
ಪ್ರಜ್ವಲ್ ದೇವರಾಜ್ ಗಂಗೆ ಬಾರೆ ತುಂಗೆ ಬಾರೆ ಎಂದು ಕೂಗಿ ಕರೆದು ಸಾಕಾಗಿ ಈಗ ಮೆರವಣಿಗೆ ಹೊರಟಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಹುಡುಗಿ ಆಂದ್ರಿತಾ ರೇ ಅವರ ಜತೆಯಾಗಿದ್ದಾರೆ. ಆಕಾಶ್, ಅರಸು ಅಂತಹ ಯಶಸ್ವಿ ಚಿತ್ರಗಳನ್ನು ನೀಡಿದ ಮಹೇಶ್ ಬಾಬು ಮೊದಲಬಾರಿಗೆ ಪ್ರಜ್ವಲ್ ಅವರ ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಚಿತ್ರವೂ ಯಶಸ್ವಿಯಾಗಿ ಹ್ಯಾಟಿಕ್ರ್ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಜೂ. 27 ರಂದು ಈ ಚಿತ್ರ ರವಿಚಂದ್ರನ್, ಜಗ್ಗೇಶ್ ಜೋಡಿಯ ಟಾಟಾ ಬಿರ್ಲಾ ಜತೆ ಬೆಳ್ಳಿತೆರೆ ಏರಲಿದೆ.
ರಾಜ್ ಕುಮಾರ್ ಅವರ ಬ್ಯಾನರ್ ಬಿಟ್ಟು ಹೊರಗಡೆ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿರುವ ಮಹೇಶ್ ಬಾಬು, ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದ್ದಾರೆ. ಯುವಜನತೆಯ ನಾಡಿಮಿಡಿತ ಅರಿತಿರುವ ಮಹೇಶ್ ಬಾಬು ಈಗಾಗಲೇ ಪುನೀತ್ ಅಭಿನಯದ ಅಕಾಶ್, ಅರಸು ಚಿತ್ರದ ಮೂಲಕ ಅದನ್ನು ಸಾಬೀತು ಮಾಡಿದ್ದಾರೆ. ಮೆರವಣಿಗೆ ಚಿತ್ರದಲ್ಲಿ ಹೆಚ್ಚಿನ ದೃಶ್ಯಗಳು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ದೃಶ್ಯಗಳು ನಗರ ಜೀವನವನ್ನು ಬಿಂಬಿಸಲಿದೆ. ಜನಾರ್ದನ ಮಹರ್ಷಿ ಸೊಗಸಾದ ಕಥೆ ಹೆಣೆದಿದ್ದಾರೆ ಎಂದು ಮಹೇಶ್ ಹೇಳಿದರು.
ಸಂತ, ಓಂಕಾರ ಮುಂತಾದ ಚಿತ್ರಗಳಿಗೆ ಸಹನಿರ್ಮಾಪಕರಾಗಿದ್ದ ಕಾಂತರಾಜ್ ಈ ಚಿತ್ರದಲ್ಲಿ ನಿರ್ಮಾಪಕನ ಹೊಣೆ ಹೊತ್ತಿದ್ದಾರೆ. ವಿ. ಮನೋಹರ್ ಸಂಗೀತ ಚಿತ್ರಕ್ಕಿದೆ. ಪ್ರಜ್ವಲ್ ಹಾಗೂ ಆಂದ್ರಿತಾ ಜೋಡಿ ಚಿತ್ರ ಬಿಡುಗಡೆ ಮುನ್ನವೇ ಸಾಕಷ್ಟು ಕಾರಣಗಳಿಂದ ಜನಪ್ರಿಯವಾಗಿದೆ. ಇದುವರೆವಿಗೂ ಭರ್ಜರಿ ಯಶಸ್ಸು ಕಾಣಲು ತವಕಿಸುತ್ತಿರುವ ಪ್ರಜ್ವಲ್ ಗೆ ಈ ಚಿತ್ರದ ಗೆಲುವು ಮುಖ್ಯವಾಗಿದೆ.
(ದಟ್ಸ್ ಸಿನಿವಾರ್ತೆ)
ಚಿಗರೆ ಕಂಗಳ ಆಂದ್ರಿತಾ ರೇಗೆ ಅದೃಷ್ಟವೋ ಅದೃಷ್ಟ