Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಸರವಳ್ಳಿ ಚಿತ್ರದಲ್ಲಿ ನಟಿಸಲು ಸಿದ್ಧ, ಆದರೆ...ಪುನೀತ್
ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಲು ನನ್ನದೇನು ತಕರಾರಿಲ್ಲ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. ಕನ್ನಡದ ಪ್ರತಿಭಾವಂತ ನಿರ್ದೇಶಕ ಡಾ.ಗಿರೀಶ್ ಕಾಸರವಳ್ಳಿ ಚಿತ್ರಗಳಲ್ಲಿ ನಟಿಸಲು ನನ್ನದೇನು ಅಭ್ಯಂತರವಿಲ್ಲ. ಆದರೆ ನನ್ನ ಚಿತ್ರ ಎಲ್ಲರಿಗೂ ತಲುಪಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಕೇವಲ ಏಳು ಎಂಟು ಜನ ನೋಡುವುದು ನನಗಿಷ್ಟವಿಲ್ಲ ಎಂದಿದ್ದಾರೆ ಪುನೀತ್ ರಾಜ್ ಕುಮಾರ್.
ಸಿನಿಮಾ ಎಂಬುದು ಮನರಂಜನಾ ಮಾಧ್ಯಮ. ಚಿತ್ರದಿಂದ ಚಿತ್ರಕ್ಕೆ ನನ್ನ ಸಾಮರ್ಥ್ಯ ಸಹ ಹೆಚ್ಚಾಗುತ್ತಿದೆ. 'ರಾಜ್ ದಿ ಶೋ ಮ್ಯಾನ್' ಹಾಗೂ 'ಪೃಥ್ವಿ' ಚಿತ್ರಗಳು ಇನ್ನೂ ಉತ್ತಮವಾಗಿ ಮೂಡಿಬರಬೇಕಾಗಿತ್ತು. ಆದರೆ ನಿರ್ದೇಶಕರ ದೃಷ್ಟಿಕೋನವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. 'ಪೃಥ್ವಿ'ಯಂತಹ ಉತ್ತಮ ಚಿತ್ರ ಕೊಟ್ಟ ಜಾಕಬ್ ವರ್ಗೀಸ್ ಜೊತೆ ಮತ್ತೊಮ್ಮೆ ಕೆಲಸ ಮಾಡಬೇಕೆಂದಿದ್ದೇನೆ.
'ಪೃಥ್ವಿ' ಚಿತ್ರವನ್ನು ನೋಡಿದ ಹೊರ ರಾಜ್ಯದ ನಿರ್ದೇಶಕರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಅತ್ಯುತ್ತಮ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ನಿಯಮ. ಚಿತ್ರದ ಬಜೆಟ್ ಮುಖ್ಯವಲ್ಲ. ಚಿತ್ರವನ್ನು ಹೇಗೆ ತಯಾರಿಸ ಬೇಕು ಎಂಬುದು ಮುಖ್ಯ. 'ಪೃಥ್ವಿ' ಒಂದು ಪ್ರಯೋಗಾತ್ಮಕ ಚಿತ್ರ ಎನ್ನಬಹುದು ಎಂದಿದ್ದಾರೆ ಪುನೀತ್.