Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರನೇ ಚಿತ್ರವೆಂಬ ಹಣೆಪಟ್ಟಿಯ ಶಿವಣ್ಣನ 'ಶಿವ'
ಶಿವರಾಜ್ ಕುಮಾರ್ 100 ಚಿತ್ರ ಯಾವುದೆಂದು ಕೇಳಿದರೆ ಈಗ ಯಾರೂ ಹಿಂದೆಮುಂದೆ ನೋಡದೇ 'ಜೋಗಯ್ಯ' ಅನ್ನಬಲ್ಲರು. ಆದರೆ ಶಿವಣ್ಣನ ನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡರೂ ಜೋಗಯ್ಯ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ. ಹಾಗಾಗಿ ಆ ಚಿತ್ರದ ಬದಲಿಗೆ ಬೇರೆ ಒಂದು ಚಿತ್ರವನ್ನು ಶಿವಣ್ಣನ ನೂರನೆ ಚಿತ್ರ ಎಂದು ಬಿಂಬಿಸಲು ಶತಪ್ರಯತ್ನ ಇನ್ನಿಲ್ಲದಂತೆ ನಡೆಯುತ್ತಿದೆ.
ಅದು ಶಿವರಾಜ್ ಕುಮಾರ್ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿರುವ ಶಿವ. ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರ ಅಭಿಮಾನಿಗಳ ಪಾಲಿನ ನೂರನೇ ಚಿತ್ರ ಎಂದೇ ಹೇಳುತ್ತಿದ್ದಾರೆ ಶ್ರೀಕಾಂತ್. ಅಷ್ಟೇ ಅಲ್ಲ, ಚಿತ್ರ ಚೆನ್ನಾಗಿ ಮೂಡಿಬಂದದ್ದು ಗೆಲ್ಲುವುದು ಗ್ಯಾರಂಟಿ ಎಂದು ಕೂಡ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಮೇ 18ರಂದು ಬಿಡುಗಡೆ ಮಾಡಲು ನಿರ್ಧರಿಸಿಲಾಗಿದೆ.
ಆದರೆ ನಿರ್ಮಾಪಕ ಲೆಕ್ಕಾಚಾರದ ಬಗ್ಗೆ ಪ್ರೇಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಕಾರಣ ಶಿವಣ್ಣನ ನೂರನೆ ಚಿತ್ರ ಎಂದು ಡಂಗುರ ಸಾರಿದ್ದರೂ ಜೋಗಯ್ಯ ಕಥೆ ಏನಾಯ್ತು ಎಂಬುದು ಶ್ರೀಕಾಂತ್ ಅವರಿಗೂ ಗೊತ್ತಿದೆ. ಶಿವಣ್ಣನ ನೂರನೇ ಚಿತ್ರ ಎಂಬ ಕಾರಣಕ್ಕೆ ಶತದಿನೋತ್ಸವ ಆಚರಿಸುತ್ತದೆ ಎಂದಾಗಿದ್ದರೆ ಜೋಗಯ್ಯನಿಗೆ ಆ ಗತಿ ಬರುತ್ತಿರಲಿಲ್ಲ. ಮತ್ತೆ ನೂರನೆ ಚಿತ್ರ ಎಂದು ಹೇಳಿಕೊಂಡು ತಿರುಗುವುದೇಕೆ?
ಪ್ರೇಕ್ಷಕರು ಚೆನ್ನಾಗಿರುವ ಚಿತ್ರವನ್ನು ಸ್ವೀಕರಿಸುತ್ತಾರೆಯೇ ಹೊರತೂ ನೂರನೇ ಚಿತ್ರ ಎಂದೇನಲ್ಲ. ಈ ವಿಷಯ ಜೋಗಯ್ಯ ಸೋತ ಮೇಲೂ ನಿರ್ಮಾಪಕ ಶ್ರೀಕಾಂತ್ ಅವರಿಗೆ ಅರ್ಥವಾಗದಿದ್ದರೆ ಹೇಗೆ ಎಂದು ಸಿನಿಪ್ರೇಕ್ಷಕರು ಮಾತನಾಡತೊಡಗಿದ್ದಾರೆ. ಚಿತ್ರ ಚೆನ್ನಾಗಿದ್ದರೆ ಪ್ರೇಕ್ಷಕರು ಬಂದೇ ಬರುತ್ತಾರೆ, ಅದು ನೂರಾ ಒಂದನೆಯದಾದರೂ ಚಿಂತೆಯೇನು ಎಂಬ ಪ್ರೇಕ್ಷಕರ ಮಾತು ನಿರ್ಮಾಪಕರಿಗೆ ಅರ್ಥವಾದರೆ ಒಳಿತು. (ಒನ್ ಇಂಡಿಯಾ ಕನ್ನಡ)