Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದ ದೇವದಾಸ
ಈಗಾಗಲೆ ದೇವದಾಸ ಹಲವು ಭಾಷೆಗಳಲ್ಲಿ ತೆರೆಗೆ ಬಂದು ಹೋಗಿದ್ದಾನೆ. ಆದರೆ ಕನ್ನಡದಲ್ಲಿ ಬರುತ್ತಿರುವ 'ದೇವದಾಸ' ಕೊಂಚ ಭಿನ್ನವಾಗಿರುತ್ತಾನೆ.ಆದರೆ ಕೈಯಲ್ಲಿ ಸಾರಾಯಿ ಬಾಟಲಿ ಇರುವುದಿಲ್ಲವೆ?ಎಂದು ಕೇಳಬೇಡಿ, ಖಂಡಿತ ಇರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಬಿಸಿಡಿ ಶಾಂತಕುಮಾರ್.
ಈ ದೇವದಾಸ ಸಾಫ್ಟ್ವೇರ್ ಇಂಜಿನಿಯರ್. ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ತಿರುಗುತ್ತಿರುತ್ತಾನೆ . ಜೊತೆಗೆ ಅವನ ಪ್ರೀತಿಯ ನಾಯಿಯೂ ಇರುತ್ತದೆ. ಇವನು ಯಾಕೆ ಹೀಗಾದ. ಇವನ ಕೈಗೆ ಸಾರಾಯಿ ಬಾಟಲಿ ಏಕೆ ಬಂತು ಎಂಬ ಪ್ರಶ್ನೆಗಳಿಗೆ ಉತ್ತರ ತೆರೆಯ ಮೇಲೆಯೇ ಸಿಗಲಿದೆ.
ಚಿತ್ರದ ನಿರ್ದೇಶಕರು ಚಿತ್ರಕತೆಯನ್ನು ಐದು ವರ್ಷಗಳ ಹಿಂದೆಯೇ ಹೆಣೆದಿದ್ದರಂತೆ. ಆದರೆ ಅವರ ಅಭಿರುಚಿಯ ನಾಯಕ ಸಿಗದೆ ಸುಮ್ಮನಾಗಿದ್ದರಂತೆ. ಲೂಸ್ ಮಾದ ಯೋಗೀಶ್ನನ್ನು ನೋಡಿದ ಬಳಿಕ 'ದೇವದಾಸ' ಚಿತ್ರಕ್ಕೆ ಮರು ಜೀವ ಬಂತು ಎನ್ನುತ್ತಾರೆ ಶಾಂತಕುಮಾರ್.
ಆಧುನಿಕ ದೇವದಾಸನಿಗೆ ಪಾರು ಆಗಿ ಜಿನಾಲ್ ಪಾಂಡೆ ಎಂಬ ದಂತದ ಗೊಂಬೆ ಅಭಿನಯಿಸಿದ್ದಾರೆ. ಈ ಚಿತ್ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಜೋಶ್ವಾ ಶ್ರೀಧರ್ ಅವರ ಸಂಗೀತ, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಚಿತ್ರಕ್ಕಿದೆ.ನೇತಾನ್ಯ, ಚಿತ್ರದ ಮತ್ತೊಬ್ಬ ನಾಯಕಿ. ಸ್ವಸ್ತಿಕ್ ಮುನಿರಾಜು ಹಾಗೂ ಎಚ್ ಎಂ ಕೃಷ್ಣಮೂರ್ತಿ ನಿರ್ಮಾಪಕರು. [ಲೂಸ್ ಮಾದ]