Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ದಿಲ್ಲದೆ ಚಿಗುರುತ್ತಿರುವ ಕನಸು ಹಾಗೂ ಅಭಿ
*ದಟ್ಸ್ಕನ್ನಡ ಬ್ಯೂರೊ
ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರ ಕೆ.ಶಿವರಾಮಕಾರಂತರ ಜನಪ್ರಿಯ ಕಾದಂಬರಿ ‘ಚಿಗುರಿದ ಕನಸು’ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ.
ಟಿ.ಎಸ್.ನಾಗಾಭರಣ ನಿರ್ದೇಶನದ ‘ಚಿಗುರಿದ ಕನಸು’ ಚಿತ್ರದ ಚಿತ್ರೀಕರಣ ದೆಹಲಿಯ ಸುತ್ತಮುತ್ತ ಇತ್ತೀಚೆಗೆ ನಡೆದಿದ್ದು - ಶಿವರಾಜ್ಕುಮಾರ್ ಹಾಗೂ ಇತರರು ಅಭಿನಯಿಸಿದ ದೃಶ್ಯಗಳನ್ನು ಛಾಯಾಗ್ರಾಹಕ ಗೌರೀಶಂಕರ್ ಚಿತ್ರಿಸಿಕೊಂಡರು. ದೆಹಲಿಯ ವಿಮಾನ ನಿಲ್ದಾಣ, ಸಪ್ಧರ್ ಪಾರ್ಕ್, ಸುರಾನಾ ಕ್ಲೂ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಿತು.
ದೆಹಲಿ, ಬನಾರಸ್ಗಳಲ್ಲೂ ‘ಚಿಗುರಿದ ಕನಸು’ ಸಿನಿಮಾದ ಶೂಟಿಂಗ್ ನಡೆಯಲಿದೆ.
ಅಭಿ ಬಂದ ಅಭಿ
ಒಂದೆಡೆ ‘ಚಿಗುರಿದ ಕನಸು’ ಚಿತ್ರೀಕರಣದ ನ್ಯಾಪಕವಾಗಿ ನಡೆಯುತ್ತಿದ್ದರೆ, ಇನ್ನೊಂದೆಡೆ ಪುನೀತ್ ನಾಯಕನಟನಾಗಿ ಅಭಿನಯಿಸಿರುವ ಎರಡನೇ ಚಿತ್ರ ‘ಅಭಿ’ಗೆ ಅಭಿಮಾನಿಗಳ ಉತ್ಸಾಹ ಜೋರಾಗಿದೆ. ಯಥಾಪ್ರಕಾರ, ನಕ್ಷತ್ರ-ಮೆರವಣಿಗೆ-ಹಾಲಿನ ಅಭಿಷೇಕ-ಸಿಹಿ ಹಂಚಿಕೆಯ ಸಂಭ್ರಮ ತುಳುಕುತ್ತಿದೆ.
ಅಭಿಮಾನಿಗಳಿಗೆ ಅಣ್ಣಾವ್ರ ಹುಟ್ಟುಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗಿರುವ ‘ಅಭಿ’ ಏಪ್ರಿಲ್ 25ರ ಶುಕ್ರವಾರ ತೆರೆ ಕಂಡಿದೆ. ಒಂದು ಮೂಲದ ಪ್ರಕಾರ, ಬಿಡುಗಡೆಗೆ ಮುನ್ನವೇ ‘ಅಭಿ’ 3 ಕೋಟಿ ರುಪಾಯಿ ಲಾಭದಲ್ಲಿದೆ.
ಅಂತೂ ರಾಜ್ ಕ್ಯಾಂಪ್ನಲ್ಲಿ ಕಲರವ ಮರಳಿದೆ ಎಂದಾಯಿತು!
ಮುಖಪುಟ / ಸ್ಯಾಂಡಲ್ವುಡ್