Don't Miss!
- Automobiles Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ.ರಾಜ್ಕುಮಾರ್ ಟ್ರಸ್ಟ್ನಲ್ಲಿ ಬರಗೂರು ಮತ್ತು ನಿಸಾರ್
ಬೆಂಗಳೂರು : ಕೆರೆಯ ನೀರನು ಕೆರೆಗೆ ಚೆಲ್ಲಲು ಡಾ.ರಾಜ್ಕುಮಾರ್ ಕುಟುಂಬ ಮುಂದಾಗಿದೆ. ಬರಗೂರು ರಾಮಚಂದ್ರಪ್ಪ ಮತ್ತು ನಿಸಾರ್ ಅಹಮದ್ ಅವರ ಮಾರ್ಗದರ್ಶನದಲ್ಲಿ ಡಾ.ರಾಜ್ಕುಮಾರ್ ಟ್ರಸ್ಟ್ ರೂಪುಗೊಂಡಿದೆ.
ರಾಜ್ರ 79ನೇ ಜನ್ಮದಿನದಂದು ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದ್ದು, ಐದು ಲಕ್ಷ ರೂ.ಗಳ ಮೂಲಧನದೊಂದಿಗೆ, ಸೇವಾ ಕೈಂಕರ್ಯವನ್ನು ಆರಂಭಿಸಿದೆ. ಯಾರ ಬಳಿಯೂ ಚಂದಾ ಕೇಳದೇ(ಅವರಾಗಿ ನೀಡಿದರೆ ಅಭ್ಯಂತರವಿಲ್ಲ), ಆದಾಯದ ಒಂದು ಭಾಗವನ್ನು ಟ್ರಸ್ಟ್ ಚಟುವಟಿಕೆಗೆ ಮೀಸಲಿಡುವುದಾಗಿ ರಾಜ್ ಕುಟುಂಬ ಹೇಳಿದೆ.
ಪದಾಧಿಕಾರಿಗಳು : ಪಾರ್ವತಮ್ಮ ರಾಜ್ಕುಮಾರ್(ಅಧ್ಯಕ್ಷೆ), ಶಿವರಾಜ್ ಕುಮಾರ್(ಉಪಾಧ್ಯಕ್ಷ), ರಾಘವೇಂದ್ರ ರಾಜ್ಕುಮಾರ್(ಕಾರ್ಯದರ್ಶಿ ಮತ್ತು ಖಜಾಂಚಿ), ಪುನೀತ್(ಪ್ರಧಾನ ಸದಸ್ಯ), ಭುಜಂಗ ಶೆಟ್ಟಿ, ಬರಗೂರು ರಾಮಚಂದ್ರಪ್ಪ ಮತ್ತು ನಿಸಾರ್ ಅಹಮದ್(ಮಾರ್ಗದರ್ಶಕರು)
ಟ್ರಸ್ಟ್ ಉದ್ದೇಶ : ಅಶಕ್ತ ರಂಗ ಮತ್ತು ಸಿನಿ ಕಲಾವಿದರಿಗೆ ಆಸರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ, ನೇತ್ರದಾನಕ್ಕೆ ಪ್ರೇರಣೆ, ದೃಷ್ಠಿಹೀನರ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮತ್ತಿತರ ಉದ್ದೇಶವನ್ನು ಟ್ರಸ್ಟ್ ಹೊಂದಿದೆ.
(ದಟ್ಸ್ ಕನ್ನಡ ವಾರ್ತೆ)