Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷಗಳ ಹಿಂದೆ ನಾನು ಮೆರೆದೆ - ಹಂಸ್
ಹಂಸಲೇಖಾರ ಸ್ಥಾನಕ್ಕೀಗ ಗುರುಕಿರಣ್ ಬಂದು ಕೂತಿದ್ದಾರೆ. ಗಾಂಧಿನಗರದ ಮಂದಿ ಇಂಥದೊಂದು ವಟವಟ ಶುರುವಿಡುವ ಹೊತ್ತಿಗೆ ಹಂಸ್, ನಗರದ ಸರಕಾರಿ ಕಲಾ ಕಾಲೇಜಿನ ಆವರಣದಲ್ಲಿದ್ದರು. ಕೈಲಿ ಪುಸ್ತಕವಿತ್ತು . ಅಂಗಿಯ ಜೇಬಲ್ಲಿ ಪೆನ್ನು !
ಅರೆ, ಹಂಸಲೇಖಾ ಅವರು ಇಲ್ಲಿ ಬಂದರೇಕೆ ಎಂದು ಪ್ರಶ್ನೆಗಳು ಏಳುವ ಮುನ್ನವೇ ಅವರು ತಾವಾಗಿಯೇ ಹೇಳಿದರು. ಈ ಮೊದಲು ಓದಲು ಸಾಧ್ಯವಾಗಿರಲಿಲ್ಲ . ಕನ್ನಡದಲ್ಲಿ ಎಂ.ಎ. ಮಾಡಬೇಕಂತ ತುಂಬ ಆಸೆಯಿತ್ತು . ಈಗ ಅದನ್ನು ಈಡೇರಿಸಿಕೊಳ್ತಿದೀನಿ.
ಅರೆ, ಸಿನಿಮಾದಲ್ಲಿ ಸದಾ ಹಾರ್ಮೋನಿಯಂ, ತಬಲಾಗಳ ಮಧ್ಯೆಯೇ ಕಳೆದುಹೋಗ್ತಿದ್ರಲ್ಲ ... ಈಗ ಹೇಗೆ ವೇಳೆ ಕಳಿತೀರಿ ಎಂದು ಕೇಳಿದರೆ ಹಂಸ್ ತಕ್ಷಣ ಉತ್ತರಿಸುತ್ತಾರೆ. ಕನ್ನಡ ಸಾಹಿತ್ಯದ ಬಗ್ಗೆ ಅದರಲ್ಲೂ ಕೇಶೀರಾಜನ ಶಬ್ದಮಣಿದರ್ಪಣಂ ಬಗ್ಗೆ ತಿಳಿಯಬೇಕು ಅಂತ ನನಗೆ ವಿಪರೀತ ಆಸೆಯಿತ್ತು . ಈಗ ಎಂ.ಎ. ನೆಪದಲ್ಲಿ ಅದಕ್ಕೊಂದು ಅವಕಾಶ ಸಿಕ್ಕಿದೆ.
... ಸಿನಿಮಾಕ್ಕೆ ಹಾಡು ಬರೆಯೋವಾಗ, ಬೇರೆ ಯಾರದೋ ಹಾಡಿಗೆ ಟ್ಯೂನ್ ಹಾಕೋವಾಗ ಇರ್ತದಲ್ಲ, ಅದರ ದುಪ್ಪಟ್ಟು ಶ್ರದ್ಧೆ ಈಗ ಅಭ್ಯಾಸದ ಮೇಲಿದೆ. ನನ್ನ ಜೊತೆ ಕಲಿಯಲಿಕ್ಕೆ ವಿವಿಧ ರಂಗಗಳಲ್ಲಿರೋ ಮಂದಿ ಬಂದಿದ್ದರು. ಅವರೆಲ್ಲರ ಉತ್ಸಾಹ, ಕಲಿಕೆಯಲ್ಲಿನ ಶ್ರದ್ಧೆ ನೋಡಿ ನನಗೂ ಉತ್ಸಾಹ ಬಂದಿದೆ ಎಂದರು ಹಂಸ್.
ಸದಾ ಅಧ್ಯಯನ... ಅಧ್ಯಯನ ಅಂತಿದ್ದೀರಲ್ಲ . ಹಾಗಾದ್ರೆ ಸಿನಿಮಾದ ಸಹವಾಸದಿಂದ ದೂರಾಗ್ತೀರಾ ಅಂದರೆ ಹಂಸ್ ತಕ್ಷಣ ಹೇಳುತ್ತಾರೆ :
ಶಾಲೆಗೆ
ಹೋದಾಕ್ಷಣಕ್ಕೆ
ಮಕ್ಕಳು
ಆಟವಾಡೋದು
ಬಿಡ್ತಾರಾ?
ಇಲ್ಲ
ತಾನೇ?
ಹಾಗೇ
ನಾನೂ
ಸಿನಿಮಾ
ರಂಗದಲ್ಲೇ
ಬದುಕಬೇಕು
ಅಂತ
ವರ್ಷಗಳ
ಹಿಂದೆಯೇ
ನಿರ್ಧರಿಸಿದ್ದಾಗಿದೆ.
ಸ್ಪರ್ಧೆ
ಎಲ್ಲಿರೋದಿಲ್ಲ
ಹೇಳಿ,
ಅದಿರಲಿ
ಈಗ
ನಂಗೆ
ಸ್ಪರ್ಧೆ
ನೀಡ್ತಿರೋರು
ಯಾರು?
ಅವರೂ
ನಮ್ಮ
ಹುಡುಗರೇ
ತಾನೇ?
ವರ್ಷಗಳ
ಹಿಂದೆ
ನಾನು
ಮೆರೆದೆ.
ಈಗ
ಅವರ
ಪಾಳಿ.
ಅವರೂ
ಮೆರೀಲಿ
ಬಿಡಿ.
ನನಗಿಂತ
ಕಿರಿಯರು
ನಲಿಯೋದನ್ನ
ಖುಷಿಯಿಂದ
ನೋಡುತ್ತಲೇ
ನಾವು
ಟೈಂಪಾಸ್
ಮಾಡಬಾರದೇಕೆ?
ಹಂಸ್
ಪ್ರಶ್ನೆ
ಕೇಳಿಯೇ
ಮಾತು
ಮುಗಿಸುತ್ತಾರೆ.
(ವಿಜಯ
ಕರ್ನಾಟಕ)