Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೈಸಿ ಎಂಬ ಚಿಗರೆ ಮರಿ ಬಾಲಿವುಡ್ಗೆ ಹೋಯ್ತಲ್ಲಪ್ಪೋ...
‘ರಾಮ ಶಾಮ ಭಾಮ’ ಮತ್ತು ‘ತವರಿನ ಸಿರಿ’ ಸಿನಿಮಾಗಳ ಮೂಲಕ ತಾನೂ ನಟಿಸಬಲ್ಲೆ ಎಂಬುದನ್ನು, ‘ಸ್ಪೈಸಿ’ಗರ್ಲ್ ಡೈಸಿ ಬೊಪ್ಪಣ್ಣ ಸಾಬೀತುಪಡಿಸಿದ್ದಾರೆ. ಅವರೀಗ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಡೈಸಿಗೆ ಬಾಲಿವುಡ್ ಹೊಸತೇನಲ್ಲ. ಈ ಹಿಂದೆ ಅಕ್ಷಯ್ ಕುಮಾರ್ ಜೊತೆ ‘ಗರಂ ಮಸಾಲ’ ಚಿತ್ರದಲ್ಲಿ ಗರಂ ಆಗಿ ಮಿಂಚಿದ್ದರು. ಡೈಸಿಗೆ ಐದು ಹಿಂದಿ ಚಿತ್ರಗಳ ಆಫರ್ ಬಂದಿದ್ದು, ಅವುಗಳಲ್ಲಿ ಎರಡಕ್ಕೆ ಗ್ರೀನ್ಸಿಗ್ನಲ್ ನೀಡಿದ್ದಾರಂತೆ.
ಈ ಚಿತ್ರಗಳ ಬಗ್ಗೆ ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ನಿರ್ಮಾಪಕರ ಕರಾರಿನ ಪ್ರಕಾರ, ಹೆಚ್ಚಿನ ವಿವರಗಳನ್ನು ನೀಡುವಂತಿಲ್ಲ. ಒಂದಂತೂ ನಿಜ, ನಾನು ಇಬ್ಬರು ಪ್ರಮುಖ ನಾಯಕರ ಜೊತೆ ನಟಿಸುತ್ತಿದ್ದೇನೆ. ಮುಂದಿನ ಜೂನ್-ಆಗಸ್ಟ್ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಡೈಸಿ ಪಿಸುಗುಟ್ಟಿದ್ದಾರೆ.
ಸ್ಪೈಸಿ ಎಂದು ಕರೆದರೆ ನನಗೆ ಇಷ್ಟವಾಗುವುದಿಲ್ಲ. ಚಿತ್ರಬದುಕು ಮತ್ತು ರಾಜ್ಕುಮಾರ್ ಬಗ್ಗೆ ನನಗೆ ಅಪಾರ ಗೌರವವಿದೆ ಎನ್ನುವ ಡೈಸಿ ಅವರ ಮುಂದಿನ ಕನ್ನಡ ಚಿತ್ರ ‘ಐಶ್ವರ್ಯ’. ಉಪೇಂದ್ರ ನಾಯಕನಟರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ, ಡೈಸಿಗೊಂದು ಚೆಂದದ ಪಾತ್ರವಿದೆಯಂತೆ.
ಕೊಡಗಿನ ಬೆಡಗಿ ಡೈಸಿ, ಸ್ಯಾಂಡಲ್ವುಡ್ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದವರು. ಕವಿತಾ ಲಂಕೇಶ್ ನಿರ್ದೇಶನದ ಪ್ರಶಸ್ತಿ ವಿಜೇತ ಚಿತ್ರ ‘ಬಿಂಬ’ ದಲ್ಲಿ ಡೈಸಿ ನಟಿಸಿದರಾದರೂ, ಅವರಿಗೆ ಕುಖ್ಯಾತಿ ನೀಡಿದ ಚಿತ್ರ‘ಭಗವಾನ್’. ಅವರ ವರಸೆಗಳನ್ನು ಕಂಡು, ಪ್ರೇಕ್ಷಕರು ಡೈಸಿಗೆ ‘ಸ್ಪೈಸಿ’ ಎಂದು ಪ್ರೀತಿಯಿಂದ ಕರೆದಿದ್ದರು.
ಡೈಸಿ ಬೊಪ್ಪಣ್ಣ ಗ್ಯಾಲರಿ
ಮುಖಪುಟ / ಸ್ಯಾಂಡಲ್ವುಡ್