Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಗಾಸ್ಟಾರ್ ಚಿರಂಜೀವಿ ಚಿತ್ರದ ಹುಚ್ಚಿಗೆ ಇಬ್ಬರ ಬಲಿ
ತೆಲುಗು ನಟ ಚಿರಂಜೀವಿ ಇವತ್ತಿಗೂ ಮೆಗಾಸ್ಟಾರ್ ಅನ್ನೋದನ್ನ ಬುಧವಾರ (ಸೆ.24) ದ ವಿದ್ಯಮಾನಗಳು ಸಾಬೀತು ಪಡಿಸಿದವು. ಅವರ ಹೊಸ ಚಿತ್ರ ‘ಠಾಗೂರ್’ ಬಿಡುಗಡೆಯಾದ ಮೊದಲ ದಿನವೇ ಇಬ್ಬರು ನೂಕುನುಗ್ಗಲಲ್ಲಿ ಸತ್ತಿದ್ದಾರೆ.
ರಾಜಮಂಡ್ರಿಯ ರಂಭಾ ಚಿತ್ರಮಂದಿರದಲ್ಲಿ ಮಂಗಳವಾರ ಸಂಜೆಯಿಂದಲೇ ಬುಧವಾರ ಬಿಡುಗಡೆಯಾಗಲಿರುವ ಚಿರಂಜೀವಿ ಚಿತ್ರಕ್ಕೆ ಟಿಕೇಟು ಗಿಟ್ಟಿಸಿಕೊಳ್ಳಲು ಅಭಿಮಾನಿಗಳು ಜಮಾಯಿಸಿದ್ದರು. ಬುಧವಾರ ಬೆಳಗ್ಗಿನಿಂದ ನೂಕು ನುಗ್ಗಲು ಅತಿಯಾಯಿತು. ಸಾಕಷ್ಟು ಪೊಲೀಸರು ಜನರನ್ನು ನಿಯಂತ್ರಿಸಲು ನಡೆಸಿದ ಯತ್ನ ಕೂಡ ಸಫಲವಾಗಲಿಲ್ಲ. ಪರಿಣಾಮವಾಗಿ ಕಾಲ್ತುಳಿತಕ್ಕೆ ಸಿಕ್ಕಿ ಲಕ್ಷ್ಮಣ್ (23) ಹಾಗೂ ರವಿಕುಮಾರ್ (30) ಎಂಬುವರು ಪ್ರಾಣ ತೆತ್ತರು. ಕಾಲ್ತುಳಿತದಲ್ಲಿ ಸುಮಾರು 10 ಮಂದಿಗೆ ಗಾಯಗಳಾಗಿದ್ದು, 8 ಮಂದಿ ಆಸ್ಪತ್ರೆಗೆ ಸೇರುವಷ್ಟು ತೊಂದರೆ ಅನುಭವಿಸಿದ್ದಾರೆ.
ಕಟೌಟ್ಗೆ ಕುರಿ ಬಲಿ : ಇದೇ ಮೊದಲ ಬಾರಿಗೆ ಚಿರಂಜೀವಿ ಚಿತ್ರ ಬಿಡುಗಡೆಯಾದ ಸಿರುಗುಪ್ಪದಲ್ಲಿ ಮಂಗಳವಾರದಿಂದಲೇ ಡೋಲು ತಮಟೆಗಳ ಸದ್ದು. ಇಡೀ ಊರಲ್ಲಿ ಹಬ್ಬದ ವಾತಾವರಣ. ಬುಧವಾರ ಜಮಾಯಿಸಿದ್ದ ಪೊಲೀಸರ ನಡುವೆಯೇ ಅಭಿಮಾನಿಗಳು 6 ಕುರಿಗಳನ್ನು ಚಿರಂಜೀವಿ ಕಟೌಟ್ಗೆ ಬಲಿ ಕೊಟ್ಟು, ರಕ್ತ ಚೆಲ್ಲಿದರು. ಇಲ್ಲೂ ಕೂಡ ಜನರ ನೂಕುನುಗ್ಗಲು ಇತ್ತು. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಲಿಲ್ಲ.
ಇದಕ್ಕೂ ಮುಂಚೆ ತೆರೆ ಕಂಡಿದ್ದ ಚಿರಂಜೀವಿ ಅಭಿನಯದ ‘ಇಂದ್ರ’ ಚಿತ್ರ ಕೂಡ ದುಡ್ಡು ಮಾಡಿತ್ತು. ಆದರೆ ‘ಠಾಗೂರ್’ ಚಿತ್ರಕ್ಕೆ ಅದಕ್ಕಿಂತ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ‘ಮುಠಾಮೇಸ್ತ್ರಿ’ ಚಿತ್ರ ಬಿಡುಗಡೆಯಾಗಿದ್ದ ದಿನದ ಸಂಭ್ರಮಗಳನ್ನು ನೆನಪಿಸುವಂತೆ ಚಿರಂಜೀವಿ ಅಭಿಮಾನಿಗಳು ವರ್ತಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್